ಬಾಳ ಕಥೆಗಳು (ಸಂಗ್ರಹ)
1 ಒಲವಿನ ಬಳ್ಳಿಯನ್ನು ಆಕೆ ಕಿತ್ತೆಸೆದಳು. ಅವನೂ ಹಠಮಾರಿ. ಅವಳನ್ನೇ ಹಿಂಬಾಲಿಸಿದ. ಕೊನೆಗೆ, ಅವಳು ನಡೆದ ಹಾದಿಯಲ್ಲಿ ಚಿಗುರಿ ಗರಿಕೆಯಾದ.
1 ಒಲವಿನ ಬಳ್ಳಿಯನ್ನು ಆಕೆ ಕಿತ್ತೆಸೆದಳು. ಅವನೂ ಹಠಮಾರಿ. ಅವಳನ್ನೇ ಹಿಂಬಾಲಿಸಿದ. ಕೊನೆಗೆ, ಅವಳು ನಡೆದ ಹಾದಿಯಲ್ಲಿ ಚಿಗುರಿ ಗರಿಕೆಯಾದ.
2 ಕಡಲಿನ ಚೆಲುವಿಗೆ ವಿಶಿಷ್ಠಕಾಂತಿ. ತುಂಬುವ ಅಲೆಗಳು ಇಡೀ ದಿನ ಹಾಡುತ್ತಲೇ ಇರುತ್ತದೆ. ಅಲ್ಲಿ ವಿವಾದ ಇರುತ್ತದೋ, ವಿನೋದ ಇರುತ್ತದೋ ಬಲ್ಲವರಿಲ್ಲ.
3 ಈಗ ಬಾಗಿಲಿಲ್ಲದ ಎದೆಯೊಳಗೆ ಭಾರವಾಗುತ್ತಲೇ ಹೋಗುತ್ತಿರುವ ಭಾವಗಳು ಹಿಂದೊಮ್ಮೆ ಬಯಲಲ್ಲಿ ಆಟವಾಡುತ್ತಿದ್ದವು.
4 ಆಸ್ಪತ್ರೆಯಲ್ಲಿ ಪ್ರಾರ್ಥನೆ, ನಿಟ್ಟುಸಿರು, ಅಸಹಾಯಕತೆ ಮತ್ತು ನಿಶ್ಯಬ್ದದ ನಡುವೆಯೇ ತನ್ನ ಹಾಜರಿ ಹಾಕುವ ಸಾವು ತನಗೆ ಬೇಕಾದವರ ವಿಳಾಸ ಹುಡುಕುತ್ತದೆ
5 ಮಹಿಳಾ ಹಕ್ಕುಗಳ ಹೋರಾಟದ ನೇತ್ರತ್ವ ವಹಿಸಿ ಹೆಸರಾಗಿದ್ದವನು, ಹೋರಾಟಕ್ಕೆ ಹೋಗುವಾಗ ತನ್ನ ಹೆಂಡತಿಯನ್ನು ಮನೆಯಲ್ಲಿ ಕೂಡಿ ಬೀಗ ಜಡಿದು ಹೋಗುತ್ತಿದ್ದ.
6 ಕಾಲೇಜು ದಿನಗಳಲ್ಲಿ ಪ್ರೀತಿಸಿ, ಮದುವೆಯಾಗಲು ನಿರ್ಧರಿಸಿದ್ದವರು, ಮತ್ತೆ ಭೇಟಿಯಾಗಿದ್ದು ಅವರ ಮೊಮ್ಮಕ್ಕಳು ಕಾಲೇಜಿನಲ್ಲಿ ಪ್ರೀತಿಮಾಡಿ ಮದುವೆಯಾಗುತ್ತೇವೆಂದು ಹಠ ಹಿಡಿದಾಗ.
7 ಮಗು ಅರ್ಧ ತಾಸಿನಿಂದ ಅತ್ತರೂ ಮನೆಯಲ್ಲಿ ಅದನ್ನು ಎತ್ತಿಕೊಳ್ಳಲು ಯಾರೂ ಮುಂದಾಗಲಿಲ್ಲ. ಮೊಬೈ ಲ್ ರಿಂಗಾದ ತಕ್ಷಣ ಅದನ್ನು ಎತ್ತಿಕೊಳ್ಳಲು ಎಲ್ಲರೂ ಓಡಿಬಂದರು.
8 ಬಸ್ ನಿಲ್ದಾಣದಲ್ಲಿ ಭಿಕ್ಷೆ ಬೇಡುತ್ತಿದ್ದ ಮುದುಕನೊಬ್ಬ ಅನಾಥವಾಗಿ ಕಸದ ಬುತ್ತಿಯಲ್ಲಿಬಿದಿದ್ದ ಹೆಣ್ಣು ಮಗುವೊಂದನ್ನು ರಕ್ಷಿಸಿ, ನಂತರ ಅದಕ್ಕೆ ಪ್ರೀತಿಯ ಅಜ್ಜನಾದ.
9 ಊಟಕ್ಕೆಂದು ಹೋಟೆಲ್ ಮುಂದೆ ಬಸ್ ನಿಲ್ಲಿಸಿದರು. ಆತ, ಹೋಟೆಲ್ ಗೆ ಹೋಗಲು ಎದ್ದಾಗ ಪಕ್ಕದ ಸೀಟಿನಲ್ಲಿ ಪ್ರಯಾಣಿಕರೊಬ್ಬರ ಇಪ್ಪತ್ತು ರೂ. ಬಿದ್ದಿರುವುದನ್ನು ನೋಡಿ, ಅದನ್ನು ಜೇಬಿಗಿಳಿಸಿ ಸುಮ್ಮನೆ ಕೂತುಬಿಟ್ಟ ಬಸ್ ಇಳಿದು ಮನೆ ತಲುಪಿದಾಗ ನೆನಪಾಯ್ತು-ಟಿಕೆಟ್ ಹಿಂದೆ ಬರೆದುಕೊಟ್ಟಿದ್ದ ಎಂಬತ್ತು ರೂಪಾಯಿ ಮರೆತಿದ್ದು.
10 ಟೀ ಕುಡಿದು, ಬಿಲ್ ಕೊಡಲು ಹೋದವ, ಅಲ್ಲಿ ರಶ್ ಇರುವುದನ್ನು ನೋಡಿ, ಮೆಲ್ಲನೆ ಯಾರಿಗೂ ಗೊತ್ತಾಗದಂತೆ ಹೊರ ನಡೆದ.ರೂ.10 ಉಳಿದಿದ್ದಕ್ಕೆ ಮನಸ್ಸು ಸಂಭ್ರಮಿಸುತ್ತಿತ್ತು. ಅದಾಗಲೇ ಆಘಾತ ಕಾದಿತ್ತು. ಅವನ ಕಾರಿನ ಗಾಜು ಒಡೆದಿದ್ದ ಕಳ್ಳರು, ಗಂಟೆಯ ಹಿಂದೆಯಷ್ಟೇ ಬ್ಯಾಂಕ್ ನಿಂದ ಡ್ರಾ ಮಾಡಿ ತಂದಿದ್ದ ರೂ 5 ಲಕ್ಷವಿದ್ದ ಬ್ಯಾಗನ್ನು ಅಪಹರಿಸಿದ್ದರು.
11 ಡಿ. ಸಿ. ಸಾಹೇಬರ ಮನೆಯಲ್ಲಿದ್ದ ನಾಯಿ ಮರಿಗೆ ಡ್ರೈವರ್ ಒಂದೊಂದೆ ಬಿಸ್ಕತ್ ಹಾಕುತ್ತಿದ್ದ. ಎರಡನೇ ಪೊಟ್ಟಣ ಬಿಡಿಸಿದಾಗ ನೆನಪಾಯ್ತು. ಬೆಳಿಗ್ಗೆ ಮನೆಯಲ್ಲಿ ಮೂರುವರ್ಷದ ಮಗಳು ಐದು ರೂಪಾಯಿ ಕ್ರೀಂ ಬಿಸ್ಕತ್ ಗೆ ಹಠ ಮಾಡಿದ್ದು, ತಾನು ಕೊಡಿಸದೇ ಬಯ್ದು ಪೆಟ್ಟುಕೊಟ್ಟಿದ್ದು ಇದೆಲ್ಲ ನೆನಪಾಗಿ ಆತ ಮಮ್ಮಲ ಮರುಗಿದ.
12 ಆಕೆ ನಾಲ್ಕು ಸೀರೆಗಳನ್ನು ಕೊಂಡುಹೋದಳು. ಮನೆಯಲ್ಲಿ ರಾದ್ಧಾಂತವಾಗಿ, ಅವಳ ಗಂಡ ಎರಡು ಸೀರೆ ಗಳನ್ನು ಹಿಂತಿರುಗಿಸಲು ಹೋದಾಗ ಮಾಲೀಕ ವಾಪಸ್ ತೆಗೆದು ಕೊಳ್ಳಬಾರದೆಂದು ಮೊದಲೇ ಹೇಳಿ ಬಂದಿದ್ದುದು. ಪಾಪ ಆ ಬಡಪಾಯಿ ಗಂಡನಿಗೆ ಗೊತ್ತಿರಲಿಲ್ಲ.
೧೩ ಅವಳು ಬದುಕಿದ್ದಾಗ ಒಂದು ಕ್ಷಣವೂ ಅವನನ್ನು ಬಿಟ್ಟಿರುತ್ತಿರಲಿಲ್ಲ. ಅಂಥಾ ಪ್ರೇಮದ ಹೆಣ್ಣು ಅವಳು. ಈಗ ಆತನೊಬ್ಬನೇ ಕುಳಿತು ನಕ್ಷತ್ರ ಎಣಿಸುತ್ತಿದ್ದಾನೆ. ಪಾಪ ಕೇಳುವವರಿಲ್ಲ!
14 ಅವನು,ಅವಳನ್ನು ಮುತ್ತಿನ ಪಲ್ಲಕ್ಕಿ ಮೇಲೆ ಕೂರಿಸಿಕೊಂಡು ಸುತ್ತಾಡಿದ. ಅವಳು ಮೈ ಮರೆತಳು. ಇವನು ದರ್ಬಾರನ್ನೇ ನಡೆಸಿದ! ತರುವಾಯ ....ಆತನಿಗೆ ನಾಲ್ಕು ಜನ ಹೆಗಲು ಕೊಡಬೇಕಾಯಿತು.
15 ಪ್ರೀತಿಸಿದ ಹೃದಯಗಳು ಹಲವು ವರುಷ ಖುಶಿಯಾಗಿದ್ದವು. ಬರ ಸಿಡಿಲಿನಂತೆ ಬಂದ ಸುದ್ದಿ ಕೇಳಿ, ಆ ಹೃದಯಗಳು ಸಾವಿನ ಕಡೆ ಮುಖ ಮಾಡಿದ್ದವು. ಕಾರಣ, ಅವರ ಪ್ರೀತಿಗೆ ಮನೆಯವರ ಒಪ್ಪಿಗೆ ಸಿಕ್ಕಿರಲಿಲ್ಲ.
16 ಅವನು ಅವಳಿಗೋಸ್ಕರ ಏನೆಲ್ಲಾ ತ್ಯಾಗ ಮಾಡಿದ್ದ. ಆದರೆ ತನ್ನ ಹೆತ್ತವರ ಬಗ್ಗೆ ಒಂದು ಕ್ಷಣವೂ ಯೋಚಿಸಲೇ ಇಲ್ಲ. ಅದರ ಫಲವಾಗಿ ಇಂದು ಅನಾಥನಾಗಿದ್ದಾನೆ.
Indu Naik
5 ಮಹಿಳಾ ಹಕ್ಕುಗಳ ಹೋರಾಟದ ನೇತ್ರತ್ವ ವಹಿಸಿ ಹೆಸರಾಗಿದ್ದವನು, ಹೋರಾಟಕ್ಕೆ ಹೋಗುವಾಗ ತನ್ನ ಹೆಂಡತಿಯನ್ನು ಮನೆಯಲ್ಲಿ ಕೂಡಿ ಬೀಗ ಜಡಿದು ಹೋಗುತ್ತಿದ್ದ.
6 ಕಾಲೇಜು ದಿನಗಳಲ್ಲಿ ಪ್ರೀತಿಸಿ, ಮದುವೆಯಾಗಲು ನಿರ್ಧರಿಸಿದ್ದವರು, ಮತ್ತೆ ಭೇಟಿಯಾಗಿದ್ದು ಅವರ ಮೊಮ್ಮಕ್ಕಳು ಕಾಲೇಜಿನಲ್ಲಿ ಪ್ರೀತಿಮಾಡಿ ಮದುವೆಯಾಗುತ್ತೇವೆಂದು ಹಠ ಹಿಡಿದಾಗ.
7 ಮಗು ಅರ್ಧ ತಾಸಿನಿಂದ ಅತ್ತರೂ ಮನೆಯಲ್ಲಿ ಅದನ್ನು ಎತ್ತಿಕೊಳ್ಳಲು ಯಾರೂ ಮುಂದಾಗಲಿಲ್ಲ. ಮೊಬೈ ಲ್ ರಿಂಗಾದ ತಕ್ಷಣ ಅದನ್ನು ಎತ್ತಿಕೊಳ್ಳಲು ಎಲ್ಲರೂ ಓಡಿಬಂದರು.
8 ಬಸ್ ನಿಲ್ದಾಣದಲ್ಲಿ ಭಿಕ್ಷೆ ಬೇಡುತ್ತಿದ್ದ ಮುದುಕನೊಬ್ಬ ಅನಾಥವಾಗಿ ಕಸದ ಬುತ್ತಿಯಲ್ಲಿಬಿದಿದ್ದ ಹೆಣ್ಣು ಮಗುವೊಂದನ್ನು ರಕ್ಷಿಸಿ, ನಂತರ ಅದಕ್ಕೆ ಪ್ರೀತಿಯ ಅಜ್ಜನಾದ.
9 ಊಟಕ್ಕೆಂದು ಹೋಟೆಲ್ ಮುಂದೆ ಬಸ್ ನಿಲ್ಲಿಸಿದರು. ಆತ, ಹೋಟೆಲ್ ಗೆ ಹೋಗಲು ಎದ್ದಾಗ ಪಕ್ಕದ ಸೀಟಿನಲ್ಲಿ ಪ್ರಯಾಣಿಕರೊಬ್ಬರ ಇಪ್ಪತ್ತು ರೂ. ಬಿದ್ದಿರುವುದನ್ನು ನೋಡಿ, ಅದನ್ನು ಜೇಬಿಗಿಳಿಸಿ ಸುಮ್ಮನೆ ಕೂತುಬಿಟ್ಟ ಬಸ್ ಇಳಿದು ಮನೆ ತಲುಪಿದಾಗ ನೆನಪಾಯ್ತು-ಟಿಕೆಟ್ ಹಿಂದೆ ಬರೆದುಕೊಟ್ಟಿದ್ದ ಎಂಬತ್ತು ರೂಪಾಯಿ ಮರೆತಿದ್ದು.
10 ಟೀ ಕುಡಿದು, ಬಿಲ್ ಕೊಡಲು ಹೋದವ, ಅಲ್ಲಿ ರಶ್ ಇರುವುದನ್ನು ನೋಡಿ, ಮೆಲ್ಲನೆ ಯಾರಿಗೂ ಗೊತ್ತಾಗದಂತೆ ಹೊರ ನಡೆದ.ರೂ.10 ಉಳಿದಿದ್ದಕ್ಕೆ ಮನಸ್ಸು ಸಂಭ್ರಮಿಸುತ್ತಿತ್ತು. ಅದಾಗಲೇ ಆಘಾತ ಕಾದಿತ್ತು. ಅವನ ಕಾರಿನ ಗಾಜು ಒಡೆದಿದ್ದ ಕಳ್ಳರು, ಗಂಟೆಯ ಹಿಂದೆಯಷ್ಟೇ ಬ್ಯಾಂಕ್ ನಿಂದ ಡ್ರಾ ಮಾಡಿ ತಂದಿದ್ದ ರೂ 5 ಲಕ್ಷವಿದ್ದ ಬ್ಯಾಗನ್ನು ಅಪಹರಿಸಿದ್ದರು.
11 ಡಿ. ಸಿ. ಸಾಹೇಬರ ಮನೆಯಲ್ಲಿದ್ದ ನಾಯಿ ಮರಿಗೆ ಡ್ರೈವರ್ ಒಂದೊಂದೆ ಬಿಸ್ಕತ್ ಹಾಕುತ್ತಿದ್ದ. ಎರಡನೇ ಪೊಟ್ಟಣ ಬಿಡಿಸಿದಾಗ ನೆನಪಾಯ್ತು. ಬೆಳಿಗ್ಗೆ ಮನೆಯಲ್ಲಿ ಮೂರುವರ್ಷದ ಮಗಳು ಐದು ರೂಪಾಯಿ ಕ್ರೀಂ ಬಿಸ್ಕತ್ ಗೆ ಹಠ ಮಾಡಿದ್ದು, ತಾನು ಕೊಡಿಸದೇ ಬಯ್ದು ಪೆಟ್ಟುಕೊಟ್ಟಿದ್ದು ಇದೆಲ್ಲ ನೆನಪಾಗಿ ಆತ ಮಮ್ಮಲ ಮರುಗಿದ.
12 ಆಕೆ ನಾಲ್ಕು ಸೀರೆಗಳನ್ನು ಕೊಂಡುಹೋದಳು. ಮನೆಯಲ್ಲಿ ರಾದ್ಧಾಂತವಾಗಿ, ಅವಳ ಗಂಡ ಎರಡು ಸೀರೆ ಗಳನ್ನು ಹಿಂತಿರುಗಿಸಲು ಹೋದಾಗ ಮಾಲೀಕ ವಾಪಸ್ ತೆಗೆದು ಕೊಳ್ಳಬಾರದೆಂದು ಮೊದಲೇ ಹೇಳಿ ಬಂದಿದ್ದುದು. ಪಾಪ ಆ ಬಡಪಾಯಿ ಗಂಡನಿಗೆ ಗೊತ್ತಿರಲಿಲ್ಲ.
೧೩ ಅವಳು ಬದುಕಿದ್ದಾಗ ಒಂದು ಕ್ಷಣವೂ ಅವನನ್ನು ಬಿಟ್ಟಿರುತ್ತಿರಲಿಲ್ಲ. ಅಂಥಾ ಪ್ರೇಮದ ಹೆಣ್ಣು ಅವಳು. ಈಗ ಆತನೊಬ್ಬನೇ ಕುಳಿತು ನಕ್ಷತ್ರ ಎಣಿಸುತ್ತಿದ್ದಾನೆ. ಪಾಪ ಕೇಳುವವರಿಲ್ಲ!
14 ಅವನು,ಅವಳನ್ನು ಮುತ್ತಿನ ಪಲ್ಲಕ್ಕಿ ಮೇಲೆ ಕೂರಿಸಿಕೊಂಡು ಸುತ್ತಾಡಿದ. ಅವಳು ಮೈ ಮರೆತಳು. ಇವನು ದರ್ಬಾರನ್ನೇ ನಡೆಸಿದ! ತರುವಾಯ ....ಆತನಿಗೆ ನಾಲ್ಕು ಜನ ಹೆಗಲು ಕೊಡಬೇಕಾಯಿತು.
15 ಪ್ರೀತಿಸಿದ ಹೃದಯಗಳು ಹಲವು ವರುಷ ಖುಶಿಯಾಗಿದ್ದವು. ಬರ ಸಿಡಿಲಿನಂತೆ ಬಂದ ಸುದ್ದಿ ಕೇಳಿ, ಆ ಹೃದಯಗಳು ಸಾವಿನ ಕಡೆ ಮುಖ ಮಾಡಿದ್ದವು. ಕಾರಣ, ಅವರ ಪ್ರೀತಿಗೆ ಮನೆಯವರ ಒಪ್ಪಿಗೆ ಸಿಕ್ಕಿರಲಿಲ್ಲ.
16 ಅವನು ಅವಳಿಗೋಸ್ಕರ ಏನೆಲ್ಲಾ ತ್ಯಾಗ ಮಾಡಿದ್ದ. ಆದರೆ ತನ್ನ ಹೆತ್ತವರ ಬಗ್ಗೆ ಒಂದು ಕ್ಷಣವೂ ಯೋಚಿಸಲೇ ಇಲ್ಲ. ಅದರ ಫಲವಾಗಿ ಇಂದು ಅನಾಥನಾಗಿದ್ದಾನೆ.
Indu Naik