Machine Translate:

Till I translate the Kannada Posts, please find the broken machine translation done by Google Translator. [ It is very bad though! :( ]

Thursday, July 31, 2014

ಕೌಟುಂಬಿಕ ಸಂತೋಷ ಕೂಟ


ಅಂದು ನನ್ನ ಕೌಟುಂಬಿಕ ಬಂಧುಗಳೆಲ್ಲರೂ ಒಟ್ಟಾಗಿ ಸೇರಿ ಈ ಸಂತೋಷ-ಕೂಟದಲ್ಲಿ ಭಾಗಿಯಗಿದ್ದೆವು. ನಾನು ಕಾರ್ಯಕ್ರಮದ ನಿರೂಪಕಿ ಯಾಗಿದ್ದೆ.  ನನ್ನ ಸಹೋದರ, ಆತನ ಪತ್ನಿ ಮತ್ತು ಮನೆಯವರು ವ್ಯವಸ್ಥೆ ಗೊಳಿಸಿದ ಅತ್ಯಂತ ಶುಚಿಯಾದ, ರುಚಿಕಟ್ಟಾದ ಊಟದ ನಂತರ ಸುಂದರ ವರ್ಣ- ಮಯ ಅಪರಾಹ್ನ ದಲ್ಲಿ, ಹೊರಗಿನ ಮುಂಗಾರು-ಮಳೆಯ ತಟ-ಪಟ ಹನಿಯ ಸದ್ದಿನಲಿ, ಕವಿ-ಭಾಷೆಯಲಿ ಹೇಳುವಂತೆ ಮನಸಿನ-ಪುಳಕ, ಭಾವನೆಗಳ ಜಳಕ ದೊಂದಿಗೆ ವಿನೂತನ ಶೈಲಿಯಲ್ಲಿ ಅಂದಿನ ಕಾರ್ಯಕ್ರಮವನ್ನು ನನ್ನ ಅಕ್ಕಂದಿರು-ಭಾವಂದಿರು, ತಂಗಿಯರು, ಅಕ್ಕನ ಮಕ್ಕಳು-ಸೊಸೆಯಂದಿರು, ನಮ್ಮ ಕೆಲವೇ ಆಪ್ತರೊಂದಿಗೆ ಆರಂಭಿಸಿದ್ದೆ.

 ದಿನಾಂಕ ೨೭ -೭-೨೦೧೪ರಂದು ಅಂಕೋಲಾದ ನನ್ನತಾಯಿ ಮನೆಯಲ್ಲಿ ನಡೆದ ಈ ಕೌಟುಂಬಿಕ ಸಂತೋಷ-ಕೂಟದಲ್ಲಿ ಸನ್ಮಾನಕ್ಕೊಳಗಾದ ನನ್ನ ಹಿರಿಯಕ್ಕ ಬೇಬಿ ಮತ್ತು ಎರಡನೆಯ ಹಿರಿಯಕ್ಕ ಸುಮಾ ಇವರೀರ್ವರ ಬಗ್ಗೆ ನಾ ಬರೆದ ಅನಿಸಿಕೆಗಳು ಇಲ್ಲಿದೆ.....

            ಕಟ್ಟು-ನಿಟ್ಟಿನ ಶಿಸ್ತಿನ ಸಿಪಾಯಿಯಂತಿರುವ ತಂದೆ ಶಂಕರ

            ಪ್ರೀತಿ-ಮಮತೆಯನ್ನೇ ಧಾರೆಯೆರೆದ ತಾಯಿ ಮನೋರಮ

            “ಆರು ಹೆಣ್ಣು-ಒಂದು ಗಂಡು” ಇವರ ತುಂಬು ಕುಟುಂಬ.

            ಬೆಳೆಸಿದರೆಲ್ಲರ ಮೇಲೆ ಹರಿಸಿ ತಮ್ಮ ಸಮಾನ ಬಿಂಬ.

ತಾಯ್ತಂದೆಯರ ಕುಟುಂಬಲ್ಲಿ ಜನಿಸಿದ

ಪ್ರಥಮ-ಪುತ್ರಿ ಸರೋಜಿನಿ

                        ನಮ್ಮೆಲ್ಲರ ಹಿರಿಯಕ್ಕ-ತಾಯಿ-ಬೇಬಿ-ಬೆಬಕ್ಕ.

                                    ದ್ವಿತೀಯ ಪುತ್ರಿ ಸುಮಾ

                        ನಮ್ಮೆಲ್ಲರ ಎರಡನೆಯ ಹಿರಿಯಕ್ಕ.

ಬೇಬಿ, ವೈದ್ಯಕೀಯ  ಕ್ಷೇತ್ರದಲ್ಲಿ ಸಾಧಕಿಯಾದರೆ

        ಸುಮಾ ಶಿಕ್ಷಣ ಕ್ಷೇತ್ರದಲ್ಲಿ.

ಕಣ್ಣಿನ ದೋಷ ಶಸ್ತ್ರ-ಚಿಕಿತ್ಸೆಯಿಂದ ಸರಿಪಡಿಸಿ

ರೋಗಿಗಳಿಗೆ ಬೇಬಿ ಕಣ್ಣಿನ-ಬೆಳಕನ್ನು ನೀಡಿದರೆ

ಒಂದು ದೀಪ ಇನ್ನೊಂದು ದೀಪ ಬೆಳಗುವಂತೆ

ಸುಮಾ ಅಸಂಖ್ಯಾತ  ವಿದ್ಯಾರ್ಥಿಗಳಿಗೆ

ಜ್ಞಾನದ-ಬೆಳಕನ್ನು ನೀಡಿದವಳು.

            “ಬೆಳೆಯುವ ಸಿರಿ ಮೊಳಕಯಲ್ಲಿ ಕಾಣು” ಎನ್ನುವಂತೆ

                        ಬಾಲ್ಯದಿಂದಲೂ ಇಬ್ಬರೂ ಚತುರರು.

                                    ಓದಿನಲ್ಲಿ ಇಬ್ಬರದೂ ಎತ್ತಿದ-ಕೈ.

                                    ಕಲಿಕೆಯಲ್ಲಿ ಅದಮ್ಯ ಆಸಕ್ತಿಯುಳ್ಳ ಬೇಬಿ

                        ಎಂ.ಬಿ.ಬಿ.ಎಸ್. ಡಿ.ಓ.ಎಂ.ಎಸ್. ಹಾಗೂ ಎಂ.ಎಸ್.

                                    ಶಿಕ್ಷಣ ಪೂರ್ಣಗೊಳಿಸಿದ ಬುದ್ಧಿವಂತೆ.

                                                ವೈದ್ಯಕೀಯ ಕಾರ್ಯಕ್ಷೇತ್ರದಲ್ಲಿ

                                                ಕಣ್ಣಿನ ಡಾಕ್ಟರ್ ಆಗಿ

                                    ನಲವತ್ತೆರಡು ವರ್ಷಗಳವರೆಗೆ

                                    ನಿರಂತರ ಸೇವೆಗೈದ ಪ್ರತಿಭಾನ್ವಿತೆ.

                                                ಈಕೆಯ ಅವಿಶ್ರಾಂತ ಬದುಕು

ಕಿರಿಯರಾದ ನಮಗೆಲ್ಲಾ ದಾರಿದೀಪ

                        ಭವಿಷ್ಯದತ್ತ ಹೆಜ್ಜೆ ಹಾಕುತ್ತಿರುವ ಮಕ್ಕಳಿಗೆಲ್ಲ

                        ಈಕೆ ರೋಲ್-ಮಾಡೆಲ್- ಸ್ಪೂರ್ತಿದಾಯಿನಿ.

            ದೊಡ್ಡ ಭಾವಯ್ಯನವರ ಜಾಣ್ಮೆ, ಹಿರಿತನ ಪೂರ್ಣ-ಬೆಂಬಲ

                        ಈಕೆಯ ಅವಿಶ್ರಾಂತ ಸೇವೆಗೆ ಬೆನ್ನೆಲುಬು.

            ಅಂದು ನನ್ನ ಪತಿಯ ಅನಾರೋಗ್ಯ ಗುಣಪಡಿಸಲು

                        ಸಹಕರಿಸಿ ಜೀವದಾನ ಮಾಡಿದ

            ಈ ಹಿರಿಯ ದಂಪತಿಗಳಿಗೆ ನಾನೆಂದೂ ಚಿರ-ಋಣಿ.

                         ಅರ್ಥಶಾಸ್ತ್ರದಲ್ಲಿ ಎಂ. ಎ. ಮುಗಿಸಿ

ಸ್ನಾತ್ತಕೋತ್ತರ ಪದವಿ ಪಡೆದ ಸುಮಾಗೆ

                        ನೌಕರಿ ಹುಡುಕಾಟದ ಹೋರಾಟದಲ್ಲಿ

ಅದೃಷ್ಟ ಒಲಿದು ಬಂದದ್ದು ಬಳ್ಳಾರಿಯ

 ಎ. ಎಸ್. ಎಮ್ ಕಾಲೇಜ್ ನಿಂದ

ಶಿಕ್ಷೆಗೊಳಗಾದವರಿಗೆ ವರ್ಗಾಯಿಸುವ

ಬಹು ದೂರದ ಬಿಸಿಲಿನ ಊರು ಬಳ್ಳಾರಿ

ಎಂದು ತಂದೆ ಕಳಿಸಲು ಒಪ್ಪದಿದ್ದಾಗ

ಅದ್ರಷ್ಟವೇ ಮನೆ ಬಾಗಿಲಿಗೆ ಬಂದಾಗ

ಬೇಡವೆನ್ನುವುದೇಕೆಂದು

            ಅಲ್ಲಿಯೇ ಸುಧೀರ್ಘಾವಧಿಯ ವರೆಗೆ ಉಪನ್ಯಾಸಕಿಯಾಗಿ

            ಅದೇ ಪದವಿ ಕಾಲೇಜ್ ನಲ್ಲಿ ಪ್ರಿನ್ಸಿಪಾಲ ಮೇಡಂ ಆಗಿ

            ಸೇವೆಗೈದ ನೀನು ಧೈರ್ಯವಂತೆ, ಬಲು ದಿಟ್ಟೆ.

            ಈಕೆಯ ದಿಟ್ಟತನ ಎಲ್ಲರೂ  ಮೆಚ್ಚಬೇಕಾದದ್ದೆ. 

            ಇಂದಿನ  ಮಕ್ಕಳಿಗೆ  ಯೋಗ್ಯ ಮಾರ್ಗದರ್ಶನವೂ   ಹೌದು.

            ಭಟ್ಕಳ್  ಭಾವಯ್ಯನವರ   ವಿಶಾಲ  ಮನೋಭಾವ,

            ಹಾಸ್ಯ-ಪ್ರಜ್ಞೆ, ದಯಾಳುತನ  ಈಕೆಗೆ  ಶ್ರೀರಕ್ಷೆ.

ಅಂದು ಕಲಿಯುತ್ತಿರುವ  ತಮ್ಮ-ತಂಗಿಯರಿಗೆ

            ಶಿಕ್ಷಣ  ಪೂರ್ಣಗೊಳಿಸಲು  ಸಹಕರಿಸಿ  ನನ್ನ ತಂದೆಯ

                        ಕಿಂಚಿತ್ತು ಹೊರೆ  ಕಡಿಮೆಗೊಳಿಸಿದ

ಈಕೆಯ  ಕಳಕಳಿ  ಕಾಳಜಿ  ನಾನು  ಇಂದಿಗೂ  ಮರೆತಿಲ್ಲ.

            ಉತ್ಸಾಹದ  ಚಿಲುಮೆಯಂತಿರುವ  ಇವರೀರ್ವರೂ

                        ತಮ್ಮತಮ್ಮಜೀವನ  ಪಯಣದಲಿ

            ಮಕ್ಕಳಿಗೆ  ಪ್ರೀತಿಯ  ತಾಯಿಯಾಗಿ,  ಸೊಸೆಯಂದಿರಿಗೆ  ಅಮ್ಮನಾಗಿ

            ಗಂಡನಿಗೆ  ತಕ್ಕ  ಹೆಂಡತಿಯಾಗಿ  ಭುಜಕೆ  ಭುಜಕೊಟ್ಟು

            ಹೆಜ್ಜೆಯಲ್ಲಿ  ಹೆಜ್ಜೆಯಿಟ್ಟು,  ಸಾಗುತಿಹರು  ಮುಂದೆ  ಮುಂದೆ.

            ಇವರ  ಜೀವನ  ಪಯಣ  ಸದಾ  ಹಸಿರಾಗಿರಲಿ

ಇವರ  ತುಂಬು  ಕುಟುಂಬದಲ್ಲಿ  ಸುಖ-ಶಾಂತಿ  ಸದಾ  ನೆಲೆಸಿರಲಿ 

ಎಂದು  ಮನದುಂಬಿ  ಹಾರೈಸುವೆ.  

Indu Naik 

No comments :

Post a Comment