ಬದಲಾವಣೆಯ ಕಾಲ ಸನ್ನಿಹಿತವಾಗಿದೆ
ಹಾರುವೆನು ನಾನು ದಿಗಂತದೆತ್ತರಕೆ
ಸುತ್ತ-ಮುತ್ತಲಿನ ಮೌಡ್ಯದ ಸಂಕೋಲೆಯನು ಕಳಚಿ
ವಿನೂತನ ರೀತಿಯಲಿ, ಸ್ವತಂತ್ರವಾಗಿ
ಗುರಿ ಮುಟ್ಟುವ ದಿಶೆಯಲಿ
ಹಾರುವೆನು ನಾನು ದಿಗಂತದೆತ್ತರಕೆ
ಹೆಣ್ಣಿರಲಿ, ಗಂಡಿರಲಿ
ಇಬ್ಬರಲ್ಲೂ ಸುಳಿವ ಆತ್ಮ ಒಂದೇ
ಎಂತಿರುವಾಗ
ಹೆಣ್ಣಿಗೆ ಮಾತ್ರ ಯಾಕೆ ಈ ಅನಿಷ್ಟ ಕಟ್ಟು-ಪಾಡುಗಳ ಕರ್ಮ?
ದಿನ-ನಿತ್ಯ ಟಿ. ವಿ.ಯಲಿ ಕೇಳಿ ಬರುತಿದೆ
ಜಗಜ್ಜಾಹೀರವಾಗಿ
ಹೆಣ್ಣಿನ ಮೇಲಿನ ಅತ್ಯಾಚಾರ, ಅನಾಚಾರ
ದೌರ್ಜನ್ಯ
ಪಾಪಿಗಳ ಸ್ವೇಚ್ಚಾಚ್ಛಾರ
ಅಸಾಹಯಕರ ಆಕ್ರಂದನ
ಏನೀದರ ಮರ್ಮ?
ಯಾಕೀ ವೈಪರಿತ್ಯ?
ಭೂ-ತಾಯಿ ನಲುಗಿಹಳು.
ಸಹನೆಯ ಕಟ್ಟೆಯೊಡೆದು ಸಹಿಸದಾದಾಗ
ಸಾರುತಿಹುದು
ಕಾಲದ ಇನ್ನೊಂದು ತಿರುವು 'ಬದಲಾವಣೆ '
ಅವಶ್ಯ-ಅನಿವಾರ್ಯ
ಸರಕಾರದ ಹೊಸ ಹೆಜ್ಜೆ ,
ಜನತೆಯ ಒಗ್ಗಟ್ಟು ಸೂಚಿಸುವ -
ಮಾನವ-ಸರಪಳಿ
ಎಲ್ಲವೂ ಒಟ್ಟಾಗಿ ಅಡಗಿಸದಿಹರೇ
ಪಾಪಿಗಳ ಪೈಶಾಚಿಕ ಕ್ರೌರ್ಯ ?
ಭವಿಷ್ಯದ ಬದುಕಿನ ಭರವಸೆ
ಯುವ ಪೀಳಿಗೆಯ ಹೆಣ್ಣು-ಮಕ್ಕಳಿಗೆ ನೀಡುತಿದೆ ಆಸರೆ
ಮೂರರಿಂದ ಎಪ್ಪತ್ತು ವಯಸ್ಸಿನ ವರೆಗೂ
ಹೆಣ್ಣು ಪಡೆಯುತ್ತಿರುವ ಹೊಸ-ಶಿಕ್ಷಣ 'ಸ್ವ-ರಕ್ಷಣೆ '
ಗಂಡು ಮಕ್ಕಳಿಗೆ ದುಃಖವಾದಾಗ -
ಹತ್ತಿಕ್ಕದೇ ಕಣ್ಣೀರಿನ ಮೂಲಕ ಹೊರಹಾಕುವದು
ತಾಯಿ ಕಲಿಸಬೇಕಾದ ಇನ್ನೊಂದು ಹೊಸ-ಪಾಟ
ಈ ಎಲ್ಲ ಮಾರ್ಪಾಡು ಸಾರಿದೆ
ಬದಲಾವಣೆಯ ಕಾಲ ಸನ್ನಿಹಿತವಾಗಿದೆ
ತಾಯ್ತಂದೆಯರ ಪ್ರೀತಿಯ ಆರೈಕೆಯಲಿ
ಸಹೋದರರ ಸಮನಾಗಿ
ಅನಿಷ್ಟ ಅಂಧಾಚರಣೆಗಳ ಸರಣಿಯಿಂದಾಚೆಗೆ
ಹಾರ ಬಯಸುವೆ ನಾನು
ಕೀಳರಿಮೆ ಬಿಟ್ಟು ಪಕ್ಷಿಯ ತೆರದಿ ಉತ್ತುಂಗಕೆ
... ಸಾರುತ್ತಾ.....
ಪರಿವರ್ತನೆ ಜಗದ ನಿಯಮ.
Indu Naik
Nice thoughts! Appreciating Kannada poetry. Nice flow of thoughts Keep writing more. Pooja
ReplyDeleteNice poetry.
ReplyDelete