ಹಣ
ವಿದೇಶದಲ್ಲಿರುವ ನನ್ನ ಮಗಳು ವಾಟ್ಸ್ಆಪ್ ನಲ್ಲಿ ಒಂದು ಮೆಸೇಜ್ ಕಳಿಸಿದ್ದಳು. "ಹಣ ಉಪ್ಪು ಇದ್ದಂತೆ. ಕಡಿಮೆ ತಿಂದರೆ ರುಚಿ, ಹೆಚ್ಚು ತಿಂದರೆ ದಾಹ " ಎಂದು.
ಅದನ್ನು ಓದಿದಾಗ ಎಂತಹ ಅರ್ಥಗರ್ಭಿತವಾದ ಮಾತಿದು ಎನ್ನಿಸಿತ್ತು.
ಆಗ ತಾನೆ ನಾನು ನನ್ನ ಪತಿ ಊಟವಾದ ಬಳಿಕ ಆಪ್ತರ ಮನೆಗೆ ಹೋಗಲು ನಿರ್ಧರಿಸಿದ್ದೆವು.ಆದ್ದರಿಂದ ಸಮಯ ಹಾಳು ಮಾಡದೆ ನೇರ ಅಡುಗೆ ಮನೆಗೆ ಹೋಗಿ ಅಡುಗೆ ಮಾಡಲು ಸುರು ಮಾಡಿದೆ.
ಅಭ್ಯಾಸದ ಬಲದಿಂದ ನನ್ನ ಕೈ ಅಡುಗೆ ಮಾಡುತ್ತಿದ್ದರೂ, ಮನಸ್ಸಿನಲ್ಲಿ ಮಗಳು ಕಳಿಸಿದ ಮೆಸೇಜ್ ಗುಂಯ್ ಗುಡುತ್ತಿತ್ತು.
ಹೌದಲ್ಲ. ಜೀವನದಲ್ಲಿ ಹಣ ಎಷ್ಟು ಮುಖ್ಯ. ಹಣವಿಲ್ಲದ ಬಾಳು ಊಹಿಸಲು ಸಾಧ್ಯವಿಲ್ಲ. ದಿನದ ಆರಂಭವಾಗುವುದು ಹಣದಿಂದಲೇ, ಕೊನೆಗೊಳ್ಳುವುದು ಹಣದಿಂದಲೇ. ಹಣ ಎಲ್ಲದಕ್ಕೂ ಬೇಕು. ಆಹಾರ ಧಾನ್ಯ ಖರೀದಿಸಲು, ಮನೆಕಟ್ಟಲು, ಶಿಕ್ಷಣ ಪಡೆಯಲು, ವೈದ್ಯಕೀಯ ಚಿಕಿತ್ಸೆಗೆ, ಪ್ರಯಾಣಿಸಲು ಹೀಗೆ ನಿತ್ಯ-ಜೀವನದಲ್ಲಿ ಸಾವಿರಾರು ಅವಶ್ಯಕತೆ ಪೂರೈಸಲು ಹಣ ಬೇಕೇ ಬೇಕು.
"ಹಣ ಎಂದರೆ ಹೆಣವೂ ಬಾಯಿ ಬಿಡುತ್ತದೆ" ,"ದುಡ್ಡೇ ದೊಡ್ಡಪ್ಪ" ಎನ್ನುವುದೆಲ್ಲಾ ಹಳೆಯ ಗಾದೆಮಾತು. ನೆಂಟರಿಷ್ಟರಿರಲಿ, ಹಿತೈಷಿಗಳಿರಲಿ,ಆಪ್ತರಿರಲಿ, ಅಥವಾ ಇನ್ನ್ಯಾರೆ ಇರಲಿ ಎಲ್ಲರೊಡನೆ ಅರಿತು ಬಾಳಲು ಎನ್ನುವುದಕ್ಕಿಂತ ಬೆರೆತು ಬಾಳಲು ನಮ್ಮ ಕೈಯಲ್ಲಿ ಹಣ ಇರಬೇಕು. "ಹಣ ಇಲ್ಲದವ ತೃಣಕ್ಕೆ ಸಮಾನ" ಎನ್ನುವುದು ನನ್ನ ಜೀವನದ ಅನುಭವದ ಮಾತು.
ಜಗತ್ತು ನಡೆಯುವುದೇ ಹಣದಿಂದ. ಮನುಷ್ಯನ ಬಣ್ಣ-ಬುಧ್ಧಿ ಎಲ್ಲವೂ ಬದಲಾಗುವುದು ಹಣದಿಂದ.
ಹಣವಿಲ್ಲದೆ ವ್ಯವಹಾರವಿಲ್ಲ. ಇಂದಿನ ದಿನಗಳಲ್ಲಿ ಹಣ ಇದ್ದರೆ ದೇವಸ್ಥಾನದಲ್ಲಿ ನಮ್ಮ ಇಷ್ಟ ದೇವರ ನೇರ ದರ್ಶನ ಮಾಡಬಹುದು ಸಾಲಿನಲ್ಲಿ ನಿಂತು ಕಾಯಬೇಕಂತಿಲ್ಲ.
ವಾಸ್ತವಿಕತೆಯಲ್ಲಿ ಎಲ್ಲರೂ ಹಣಕ್ಕಾಗಿಯೇ ದುಡಿಯುತ್ತಾರೆ. ಸಂತೋಷಕ್ಕಾಗಿ ಅಲ್ಲ. ದಿನ-ನಿತ್ಯ ಕಛೇರಿಗಳಲ್ಲಿ, ಸಂಘ-ಸಂಸ್ಥೆಗಳಲ್ಲಿ, 8-10 ತಾಸು ದುಡಿಯುವ ಮುಖ್ಯ ಉದ್ದೇಶ ಹಣವನ್ನು ಗಳಿಸುವುದು. ಬ್ಯಾಂಕ್ ನಲ್ಲಿ ನಮ್ಮ ಖಾತೆ ಖಾಲಿಯಾಗಿಲ್ಲ, ಖಾತೆಯಲ್ಲಿ ಹಣವಿದೆ ಎಂದಾಗ ನಾವೆಷ್ಟು ಸುರಕ್ಷಿತವಾಗಿರ್ತೇವೆ, ಸಮಾಧಾನದಿಂದ ಇರ್ತೇವೆ.
ಹಣದ ಭ್ರಾಂತಿ ಅಂತಹದ್ದು. ಹಣವಿದ್ದರೆ ಜೀವನ ಸ್ವರ್ಗ ಎನಿಸುತ್ತದೆ.
ಇನ್ನೊಂದು ಕ್ಷಣ ಇದಕ್ಕೆ ವ್ಯತಿರಿಕ್ತವಾಗಿ, ಹಣವೇ ಎಲ್ಲವೂ ಆಗಲು ಸಾಧ್ಯವೇ ಎಂದು ಯೋಚಿಸಿದೆ.
ಹಣ ನಮಗೆ ದೊಡ್ಡ-ಸುಂದರ ಮನೆ ಕೊಡಬಹುದು ಆದರೆ ಮನಶ್ಯಾಂತಿ ಅಲ್ಲ. ರುಚಿಕಟ್ಟಾದ ಆಹಾರ, ದುಬಾರಿ ವೈದ್ಯಕೀಯ ಚಿಕಿತ್ಸೆ ಕೊಡಬಹುದು ಆದರೆ ಒಳ್ಳೆಯ ಆರೋಗ್ಯ ಅಲ್ಲ.
ಹಣ ನಮಗೆ ಉತ್ತಮ ರಕ್ಷಣೆ ಕೊಡಬಹುದು ಆದರೆ ಭದ್ರತೆ ಅಲ್ಲ. ಅತ್ಯುತ್ತಮವಾದ ಹಾಸಿಗೆ ಕೊಡಬಹುದು ಆದರೆ ಗಾಢ ನಿದ್ದೆಯಲ್ಲ. ಹಣ ರೋಗಿಗೆ ರಕ್ತ ಕೊಡಬಹುದು ಆದರೆ ಜೀವ ಅಲ್ಲ. ಹಾಗಾಗಿ ಹಣದ ನಿಯಮಿತ ಬಳಕೆ ಬೇಕು.
ಹಣದ ಗುಲಾಮರಾಗಬಾರದು. ಹಣದ ಹಪಾಹಪಿ ಬೇಡ.
ಹಣ ಕ್ಷಣಿಕ. ಮನುಷ್ಯನ ಉಳಿವಿಗೆ ಹಣ ಬೇಕು ಆದರೆ ಅದರಿಂದ ಮಾನಸಿಕ ನೆಮ್ಮದಿ ಸಿಗುವುದಿಲ್ಲ. ಹಾಗಾಗಿ ಹಣ ಜೀವನದಲ್ಲಿ ಸರ್ವಸ್ವವೂ ಅಲ್ಲ.
ಹಣದ ಬಗ್ಗೆ ಇನ್ನೂ ಗಾಢವಾಗಿ ಆಲೋಚನೆ ಮಾಡಿದ್ದರೆ ಇನ್ನೂ ಹೆಚ್ಚು ಆಳವಾದ ಉನ್ನತ ವಿಚಾರ ಬರುತ್ತಿತ್ತೇನೋ ಗೊತ್ತಿಲ್ಲ. ಅಷ್ಟೊತ್ತಿಗೆ ಅಡುಗೆ ಮುಗಿದು ಸಮಯವಾದ್ದರಿಂದ ಬಡಿಸಲು ಅಣಿಯಾದೆ.
Indu Naik
(ಅತಿ ಕಡಿಮೆ ಸಮಯದಲ್ಲಿ ಹಣದ ಬಗ್ಗೆ ಹೊಸ ವಿಚಾರ ನಿಮಗೆ ಬಂದರೆ ನನ್ನ ಕಾಮೆಂಟ್ ನಲ್ಲಿ ಬರೆಯಿರಿ.)
ವಿದೇಶದಲ್ಲಿರುವ ನನ್ನ ಮಗಳು ವಾಟ್ಸ್ಆಪ್ ನಲ್ಲಿ ಒಂದು ಮೆಸೇಜ್ ಕಳಿಸಿದ್ದಳು. "ಹಣ ಉಪ್ಪು ಇದ್ದಂತೆ. ಕಡಿಮೆ ತಿಂದರೆ ರುಚಿ, ಹೆಚ್ಚು ತಿಂದರೆ ದಾಹ " ಎಂದು.
ಅದನ್ನು ಓದಿದಾಗ ಎಂತಹ ಅರ್ಥಗರ್ಭಿತವಾದ ಮಾತಿದು ಎನ್ನಿಸಿತ್ತು.
ಆಗ ತಾನೆ ನಾನು ನನ್ನ ಪತಿ ಊಟವಾದ ಬಳಿಕ ಆಪ್ತರ ಮನೆಗೆ ಹೋಗಲು ನಿರ್ಧರಿಸಿದ್ದೆವು.ಆದ್ದರಿಂದ ಸಮಯ ಹಾಳು ಮಾಡದೆ ನೇರ ಅಡುಗೆ ಮನೆಗೆ ಹೋಗಿ ಅಡುಗೆ ಮಾಡಲು ಸುರು ಮಾಡಿದೆ.
ಅಭ್ಯಾಸದ ಬಲದಿಂದ ನನ್ನ ಕೈ ಅಡುಗೆ ಮಾಡುತ್ತಿದ್ದರೂ, ಮನಸ್ಸಿನಲ್ಲಿ ಮಗಳು ಕಳಿಸಿದ ಮೆಸೇಜ್ ಗುಂಯ್ ಗುಡುತ್ತಿತ್ತು.
ಹೌದಲ್ಲ. ಜೀವನದಲ್ಲಿ ಹಣ ಎಷ್ಟು ಮುಖ್ಯ. ಹಣವಿಲ್ಲದ ಬಾಳು ಊಹಿಸಲು ಸಾಧ್ಯವಿಲ್ಲ. ದಿನದ ಆರಂಭವಾಗುವುದು ಹಣದಿಂದಲೇ, ಕೊನೆಗೊಳ್ಳುವುದು ಹಣದಿಂದಲೇ. ಹಣ ಎಲ್ಲದಕ್ಕೂ ಬೇಕು. ಆಹಾರ ಧಾನ್ಯ ಖರೀದಿಸಲು, ಮನೆಕಟ್ಟಲು, ಶಿಕ್ಷಣ ಪಡೆಯಲು, ವೈದ್ಯಕೀಯ ಚಿಕಿತ್ಸೆಗೆ, ಪ್ರಯಾಣಿಸಲು ಹೀಗೆ ನಿತ್ಯ-ಜೀವನದಲ್ಲಿ ಸಾವಿರಾರು ಅವಶ್ಯಕತೆ ಪೂರೈಸಲು ಹಣ ಬೇಕೇ ಬೇಕು.
"ಹಣ ಎಂದರೆ ಹೆಣವೂ ಬಾಯಿ ಬಿಡುತ್ತದೆ" ,"ದುಡ್ಡೇ ದೊಡ್ಡಪ್ಪ" ಎನ್ನುವುದೆಲ್ಲಾ ಹಳೆಯ ಗಾದೆಮಾತು. ನೆಂಟರಿಷ್ಟರಿರಲಿ, ಹಿತೈಷಿಗಳಿರಲಿ,ಆಪ್ತರಿರಲಿ, ಅಥವಾ ಇನ್ನ್ಯಾರೆ ಇರಲಿ ಎಲ್ಲರೊಡನೆ ಅರಿತು ಬಾಳಲು ಎನ್ನುವುದಕ್ಕಿಂತ ಬೆರೆತು ಬಾಳಲು ನಮ್ಮ ಕೈಯಲ್ಲಿ ಹಣ ಇರಬೇಕು. "ಹಣ ಇಲ್ಲದವ ತೃಣಕ್ಕೆ ಸಮಾನ" ಎನ್ನುವುದು ನನ್ನ ಜೀವನದ ಅನುಭವದ ಮಾತು.
ಜಗತ್ತು ನಡೆಯುವುದೇ ಹಣದಿಂದ. ಮನುಷ್ಯನ ಬಣ್ಣ-ಬುಧ್ಧಿ ಎಲ್ಲವೂ ಬದಲಾಗುವುದು ಹಣದಿಂದ.
ಹಣವಿಲ್ಲದೆ ವ್ಯವಹಾರವಿಲ್ಲ. ಇಂದಿನ ದಿನಗಳಲ್ಲಿ ಹಣ ಇದ್ದರೆ ದೇವಸ್ಥಾನದಲ್ಲಿ ನಮ್ಮ ಇಷ್ಟ ದೇವರ ನೇರ ದರ್ಶನ ಮಾಡಬಹುದು ಸಾಲಿನಲ್ಲಿ ನಿಂತು ಕಾಯಬೇಕಂತಿಲ್ಲ.
ವಾಸ್ತವಿಕತೆಯಲ್ಲಿ ಎಲ್ಲರೂ ಹಣಕ್ಕಾಗಿಯೇ ದುಡಿಯುತ್ತಾರೆ. ಸಂತೋಷಕ್ಕಾಗಿ ಅಲ್ಲ. ದಿನ-ನಿತ್ಯ ಕಛೇರಿಗಳಲ್ಲಿ, ಸಂಘ-ಸಂಸ್ಥೆಗಳಲ್ಲಿ, 8-10 ತಾಸು ದುಡಿಯುವ ಮುಖ್ಯ ಉದ್ದೇಶ ಹಣವನ್ನು ಗಳಿಸುವುದು. ಬ್ಯಾಂಕ್ ನಲ್ಲಿ ನಮ್ಮ ಖಾತೆ ಖಾಲಿಯಾಗಿಲ್ಲ, ಖಾತೆಯಲ್ಲಿ ಹಣವಿದೆ ಎಂದಾಗ ನಾವೆಷ್ಟು ಸುರಕ್ಷಿತವಾಗಿರ್ತೇವೆ, ಸಮಾಧಾನದಿಂದ ಇರ್ತೇವೆ.
ಹಣದ ಭ್ರಾಂತಿ ಅಂತಹದ್ದು. ಹಣವಿದ್ದರೆ ಜೀವನ ಸ್ವರ್ಗ ಎನಿಸುತ್ತದೆ.
ಇನ್ನೊಂದು ಕ್ಷಣ ಇದಕ್ಕೆ ವ್ಯತಿರಿಕ್ತವಾಗಿ, ಹಣವೇ ಎಲ್ಲವೂ ಆಗಲು ಸಾಧ್ಯವೇ ಎಂದು ಯೋಚಿಸಿದೆ.
ಹಣ ನಮಗೆ ದೊಡ್ಡ-ಸುಂದರ ಮನೆ ಕೊಡಬಹುದು ಆದರೆ ಮನಶ್ಯಾಂತಿ ಅಲ್ಲ. ರುಚಿಕಟ್ಟಾದ ಆಹಾರ, ದುಬಾರಿ ವೈದ್ಯಕೀಯ ಚಿಕಿತ್ಸೆ ಕೊಡಬಹುದು ಆದರೆ ಒಳ್ಳೆಯ ಆರೋಗ್ಯ ಅಲ್ಲ.
ಹಣ ನಮಗೆ ಉತ್ತಮ ರಕ್ಷಣೆ ಕೊಡಬಹುದು ಆದರೆ ಭದ್ರತೆ ಅಲ್ಲ. ಅತ್ಯುತ್ತಮವಾದ ಹಾಸಿಗೆ ಕೊಡಬಹುದು ಆದರೆ ಗಾಢ ನಿದ್ದೆಯಲ್ಲ. ಹಣ ರೋಗಿಗೆ ರಕ್ತ ಕೊಡಬಹುದು ಆದರೆ ಜೀವ ಅಲ್ಲ. ಹಾಗಾಗಿ ಹಣದ ನಿಯಮಿತ ಬಳಕೆ ಬೇಕು.
ಹಣದ ಗುಲಾಮರಾಗಬಾರದು. ಹಣದ ಹಪಾಹಪಿ ಬೇಡ.
ಹಣ ಕ್ಷಣಿಕ. ಮನುಷ್ಯನ ಉಳಿವಿಗೆ ಹಣ ಬೇಕು ಆದರೆ ಅದರಿಂದ ಮಾನಸಿಕ ನೆಮ್ಮದಿ ಸಿಗುವುದಿಲ್ಲ. ಹಾಗಾಗಿ ಹಣ ಜೀವನದಲ್ಲಿ ಸರ್ವಸ್ವವೂ ಅಲ್ಲ.
ಹಣದ ಬಗ್ಗೆ ಇನ್ನೂ ಗಾಢವಾಗಿ ಆಲೋಚನೆ ಮಾಡಿದ್ದರೆ ಇನ್ನೂ ಹೆಚ್ಚು ಆಳವಾದ ಉನ್ನತ ವಿಚಾರ ಬರುತ್ತಿತ್ತೇನೋ ಗೊತ್ತಿಲ್ಲ. ಅಷ್ಟೊತ್ತಿಗೆ ಅಡುಗೆ ಮುಗಿದು ಸಮಯವಾದ್ದರಿಂದ ಬಡಿಸಲು ಅಣಿಯಾದೆ.
Indu Naik
(ಅತಿ ಕಡಿಮೆ ಸಮಯದಲ್ಲಿ ಹಣದ ಬಗ್ಗೆ ಹೊಸ ವಿಚಾರ ನಿಮಗೆ ಬಂದರೆ ನನ್ನ ಕಾಮೆಂಟ್ ನಲ್ಲಿ ಬರೆಯಿರಿ.)
Very good read with an important message. Money is a means to lead life, not the purpose of life. Thanks for writing the blog.
ReplyDeleteMadam, Hana awashya,aadare adakke gulamraguvadu beda. Kshamisi, nimma hage bareyalu Barilla. Nimma magala uppin math yoga. ska
ReplyDelete