ನನ್ನ ತಂದೆ- ಕೋಟಿಗೊಬ್ಬರು
ವಿಶ್ವ ಅಪ್ಪಂದಿರ ದಿನದಂದು ನನ್ನ ಮಗ ಮತ್ತು ಮಗಳು ನನ್ನ ಪತಿಗೆ ಹ್ಯಾಪಿ ಫಾದರ್ಸ್ ಡೇ ಡ್ಯಾಡ್ ಎಂದು ವಿದೇಶದಿಂದ ಶುಭ ಹಾರೈಸಿದಾಗ, ನನ್ನ ಪತಿಗೆ ಆದ ಆನಂದ ಅಷ್ಟಿಷ್ಟಲ್ಲ.ಮುಖದ ತುಂಬಾ ಅವರ ಸಂತಸ ಕಂಡಾಗ, ನನಗೆ ನನ್ನ ತಂದೆಯ ನೆನಪಾಯ್ತು.
ಅಂದಿನ ದಿನಕ್ಕೂ ಇಂದಿಗೂ ಎಷ್ಟೊಂದು ಅಜ-ಗಜಾಂತರ ವ್ಯತ್ಯಾಸ ಅನಿಸಿತು. ಹಾಗೇ ಮೆಲುಕು ಹಾಕಿದಾಗ,ಮನಸ್ಸಿನಲ್ಲಿ ನನ್ನ ತಂದೆಯ ನೆನಪು ಹಾಗೆ ಗರಿಗೆದರಿತು.
ಅಂದಿನ ದಿನಕ್ಕೂ ಇಂದಿಗೂ ಎಷ್ಟೊಂದು ಅಜ-ಗಜಾಂತರ ವ್ಯತ್ಯಾಸ ಅನಿಸಿತು. ಹಾಗೇ ಮೆಲುಕು ಹಾಕಿದಾಗ,ಮನಸ್ಸಿನಲ್ಲಿ ನನ್ನ ತಂದೆಯ ನೆನಪು ಹಾಗೆ ಗರಿಗೆದರಿತು.
ಕಟ್ಟು-ನಿಟ್ಟಿನ ಶಿಸ್ತಿನ ಸಿಪಾಯಿಯಂತಿದ್ದರು ನನ್ನ ತಂದೆ ಶಂಕರ. ಅದಕ್ಕೆ ವ್ಯತಿರಿಕ್ತವಾಗಿ ಪ್ರೀತಿ-ಮಮತೆಯನ್ನೇ ಧಾರೆ ಎರೆದಿದ್ದರು ನನ್ನತಾಯಿ ಮನೋರಮಾ.
ಇವರದು ತುಂಬು-ಕುಟುಂಬ. ಆರು ಹೆಣ್ಣು, ಒಂದು ಗಂಡು ಆದರೂ, ಒಬ್ಬನೇ ಗಂಡು ಮಗ ಎಂದು ಮುದ್ದಿನಿಂದ ಸಾಕಿದವರಲ್ಲಾ ನನ್ನ ತಂದೆ. ಏಳೂ ಮಕ್ಕಳನ್ನು ಒಂದಿನಿತೂ ತಾರ-ತಮ್ಯವಿಲ್ಲದೆ ಸರಿಸಮಾನರಾಗಿ ಬೆಳಸಿದ್ದರು.
ಮಕ್ಕಳೆಲ್ಲರಿಗೂ ಶಕ್ತಿಮೀರಿ ಉತ್ತಮ ಶಿಕ್ಷಣ ಕೊಡಬೇಕೆಂಬುದೇ ನನ್ನ ತಂದೆಯ ಮಹದಾಸೆಯಾಗಿತ್ತು.
ಮಕ್ಕಳೆಲ್ಲರಿಗೂ ಶಕ್ತಿಮೀರಿ ಉತ್ತಮ ಶಿಕ್ಷಣ ಕೊಡಬೇಕೆಂಬುದೇ ನನ್ನ ತಂದೆಯ ಮಹದಾಸೆಯಾಗಿತ್ತು.
ಆಪ್ತರೆಲ್ಲರೂ 'ಹೆಣ್ಣುಮಕ್ಕಳನ್ನು ಹೆಚ್ಚು ಓದಿಸಬೇಡ ಮದುವೆ ಮಾಡಿಬಿಡು' ಎಂದು ಹೇಳುತ್ತಿದ್ದರೂ ಯಾರ ಮಾತನ್ನು ಹೆಚ್ಚು ಕಿವಿಯ ಮೇ ಲೆ ಹಾಕಿಕೊಳ್ಳದೆ ತನ್ನ ಗುರಿಯನ್ನು ಮುಟ್ಟಿದ್ದರು.
ಶಿಕ್ಷಣ,ಕಾಯಿದೆ,ವ್ಯೆದ್ಯಕೀಯ ಹೀಗೆ ಬೇರೆಬೇರೆ ಕ್ಷೇತ್ರದಲ್ಲಿ ಏಳೂ ಮಕ್ಕಳಿಗೂ ಅವರವರ ಸಾಮರ್ಥ್ಯಕ್ಕೆ ತಕ್ಕಂತೆ ಶಿಕ್ಷಣ ನೀಡಿದ್ದರು. ಎಲ್ಲ
ಶಿಕ್ಷಣ,ಕಾಯಿದೆ,ವ್ಯೆದ್ಯಕೀಯ ಹೀಗೆ ಬೇರೆಬೇರೆ ಕ್ಷೇತ್ರದಲ್ಲಿ ಏಳೂ ಮಕ್ಕಳಿಗೂ ಅವರವರ ಸಾಮರ್ಥ್ಯಕ್ಕೆ ತಕ್ಕಂತೆ ಶಿಕ್ಷಣ ನೀಡಿದ್ದರು. ಎಲ್ಲ
ಮಕ್ಕಳೂ ಡಬಲ್ ಡಿಗ್ರಿ ಪಡೆಯುವಂತಾಯ್ತು. ಶಿಕ್ಷಣದಲ್ಲಿ ಎಲ್ಲ ಮಕ್ಕಳ ಮೇಲೆ ಭರವಸೆ ಹೊಂದ್ದಿದ್ದರಿಂದ, ಮಕ್ಕಳಾರೂ ಅವರ ಭರವಸೆ ಹುಸಿಗೊಳಿಸಳಿಲ್ಲ.
ಮಕ್ಕಳ ಬಗ್ಗೆ ಅಪಾರ ಪ್ರೀತಿಯಿದ್ದರೂ ಎಂದಿಗೂ ಅದನ್ನು ತೋರಗೊಟ್ಟವರಲ್ಲ ನನ್ನ ತಂದೆ. ಸೆಂಟಿಮೆಂಟಲ್ ಅಟ್ಯಾಚ್ಮೆಂಟ್ ನಿಂದ ಮಕ್ಕಳು ಹಾಳಾಗಬಾರದು ಎನ್ನುವುದು ಅವರ ನಿಲುವಾಗಿತ್ತು.
ಸರಕಾರಿ ಕೆಲಸ ಮಾಡುತ್ತಿದ್ದರೂ ರಜಾ ದಿನಗಳಲ್ಲಿ ನನ್ನ ತಾಯಿಗೆ ಕೆಲಸದಲ್ಲಿ ನೆರವಾಗುತ್ತಿದ್ದರು. ಚಿಕ್ಕಮಕ್ಕಳಾದ ನಮಗೆ ಸ್ನಾನ ಮಾಡಿಸುವಾಗ ತುಂಬಾ ಕಷ್ಟವಾಗುತ್ತಿತ್ತಂತೆ.
ಆಗೆಲ್ಲ ಕಾಗದದಿಂದ ಪಾಕೀಟುಗಳನ್ನು ಮಾಡಿ ಒಬ್ಬೊಬ್ಬರ ಕೈಯಲ್ಲಿ ಒಂದೊಂದು ಜೊತೆ ಪಾಕೀಟು ಕೊಟ್ರೆ ಮುಗಿತು ಮಕ್ಕಳ ರಂಪ ಅಲ್ಲಿಗೆ ನಿಂತು ಹೋಗುತ್ತಿತ್ತು. ಅಬ್ಬಾ! ಅವರಲ್ಲಿಯ ತಾಳ್ಮೆ ಮೆಚ್ಚಬೇಕು.
ಆಯಿ -ಪಾಕೀಟು ಸಾದಾ-ಸರಳವಾಗಿತ್ತು. ದಾದಾನ ಪಾಕೀಟು ಅಂದ್ರೆ ಅದಕ್ಕೆ ಮಡಿಚಲು ಒಂದು ವಿಶೇಷ ಹೊರ ಮಡಿಕೆ ಇರುತ್ತಿತ್ತು. ಈ ಪಾಕೀಟುಗಳೇ ನಮಗೆ ಆಟಿಕೆಗಳಾಗಿದ್ದವು.
ಇನ್ನೊಂದು ಸ್ವಾರಸ್ಯಕರ ಘಟನೆ ನಾನು ಇಂದಿಗೂ ಮರೆತಿಲ್ಲ. ಶಾಲೆಯಿಂದ ಸಾಯಂಕಾಲ ಮನೆಗೆ ಬಂದರೆ ಓದಿಗೆ ಕುಳಿತುಕೊಳ್ಳಬೇಕಾಗುತ್ತಿತ್ತು. ಬಹಳ ಸಮಯ ಕರೆಂಟ್ ಇರುತ್ತಿರಲಿಲ್ಲ.ಅದಕ್ಕೆ ಬದಲಾಗಿ ಲಾಟೀನು ಇತ್ತು. ಅದಕ್ಕೆ ಫಳ-ಫಳ ಹೊಳೆಯುವ ಗ್ಲಾಸು ಇತ್ತು.
ಉರಿಯುವ ಲಾಟೀನು ತಂದು ನಮ್ಮ ಮಧ್ಯದಲ್ಲಿಟ್ಟು ಅದರ ಸುತ್ತಲೂ ವರ್ತುಲಾಕಾರವಾಗಿ ಕುಳಿತು ಓದಿಕೊಳ್ಳಲು
ನಮಗೆ ಹೇಳಿ ನಮ್ಮ ತಾಯಿ ತಮ್ಮ ಕೆಲಸಕ್ಕೆ ಹೋಗುತ್ತಿದ್ದರು.
ನಾವು ಓದುವಾಗ ಒಬ್ಬೊಬ್ಬರೇ ಆ ಲಾಟೀನನ್ನು ನಮ್ಮ ಕಡೆಗೆ ಹೆಚ್ಚುಬೆಳಕು ಬೀರಬೇಕೆಂದು ತಿರುಗಿಸುತ್ತಿದ್ದೆವು.ಅದಕ್ಕೆ ಚಿಕ್ಕ-ಪುಟ್ಟ ಪಿಸುಮಾತಿನಲ್ಲಿ ಜಗಳ ಸುರು ಆದ್ರೆ ನಮ್ಮ ತಾಯಿ ತಂದೆಯನ್ನು ಕರೆಯುತ್ತಿದ್ದರು.
ಆಗ ನನ್ನ ತಂದೆ ಏನೂ ಮಾತನಾಡದೆ ಒಂದು ಸಲ ಆ ಲಾಟೀನನ್ನು ಎತ್ತಿ ಎಲ್ಲರಿಗೂ ಅನುವಾಗುವಂತೆ ಮಧ್ಯದಲ್ಲಿಟ್ಟು ಒಮ್ಮೆ ನಮ್ಮನ್ನೆಲ್ಲಾ ನೋಡಿ ಹೋಗುತ್ತಿದ್ದರು.ತಂದೆ ಇಟ್ಟಮೇಲೆ ಮುಗಿತು.ನಮಗೆ ಹೆಚ್ಚುಬೆಳಕು ಇರಲಿ,ಕಡಿಮೆ ಬೆಳಕು ಇರಲಿ ಅಥವಾ ಬೆಳಕು ಇರದೇಇರಲಿ ತುಟಿ ಪಿಟಕ್ ಎನ್ನದೆ ಕುಳಿತು ಓದುತ್ತಿದ್ದೆವು.ತಂದೆ ಎಂದರೆ ಮಕ್ಕಳೆಲ್ಲರಿಗೂ ಅಪಾರವಾದ ಗೌರವವಿತ್ತು.
ಇದಕ್ಕಿಂತ ಇನ್ನೂ ಹೆಚ್ಚು ಸ್ವಾರಸ್ಯಕರವಾದ ಇನ್ನೊಂದು ಘಟನೆ ಎಂದರೆ ಚಿಕ್ಕವಳಿದ್ದಾಗ ನಾನು ಬಹಳ ತುಂಟಿಯಾಗಿದ್ದೆನಂತೆ. ನನ್ನ ತಾಯಿ ಹೇಳುತ್ತಿದ್ದರು.
ಮಕ್ಕಳು ಬಹಳ ಸಮಯ ಶಾಲೆಯಲ್ಲಿ ಕಳೆಯುತ್ತಿದ್ದರಿಂದ ಎಲ್ಲರನ್ನೂ ನಿಯಂತ್ರಿಸುವ ಸಮಸ್ಯೆ ಉಳಿದ ದಿನಗಳಲ್ಲಿ ಇರುತ್ತಿರಲಿಲ್ಲ.
ಆದರೆ ಭಾನುವಾರ ಬಿಡುವಿನ ದಿನ.ನನ್ನ ತಂದೆ ಮಧ್ಯಾಹ್ನದ ಊಟ ಮುಗಿಸಿ, ಸ್ವಲ್ಪ ವಿರಮಿಸಲು ಹೋಗುವಾಗ, ನನ್ನ ತಾಯಿ ನನ್ನನ್ನು ಸಂಭಾಳಿಸುವುದು ಕಷ್ಟ ಎಂದು ತಂದೆಯ ಜೊತೆ ಇರಲು ಹೇಳುತ್ತಿದ್ದರು.
ಆ ಸಮಯದಲ್ಲೆಲ್ಲ ನನ್ನ ತಂದೆ ನನಗೆ "ನಾನು ಮಲಗಿ ಏಳುವವರೆಗೂ ನೀನು ಇಲ್ಲೇ ನನ್ನ ಕಾಲ ಬಳಿ ಕುಳಿತಿರಬೇಕು ಎದ್ದು ಹೋಗಬಾರ್ದು" ಎನ್ನುತ್ತಿದ್ದರು.ತಂದೆಯ ಮಾತು ನಮಗೆ ವೇದ-ವಾಕ್ಯ ಇದ್ದಂತೆ. ಶಿರಸಾವಹಿಸಿ ಪಾಲಿಸುತ್ತಿದ್ದೆವು.
ಅವರು ಹತ್ತೇ ನಿಮಿಷ ಮಲಗಲಿ,ಇಲ್ಲವೆ ಒಂದು ತಾಸು ಮಲಗಲಿ, ಅಲ್ಲಿಯವರೆಗೂ ವಿಧೇಯಳಾಗಿ ಸುಮ್ಮನೆ ಕುಳಿತಿರುತ್ತಿದ್ದೆ.
ತಂದೆ ಎಚ್ಚೆತ್ತಾಗ ಅವರಿಗೆ ಮರೆತೇ ಹೋಗಿರ್ತಿತ್ತು. ಅರೆ, ನೀನು ಇಲ್ಲಿಯೇ ಕುಳಿತಿದ್ದಿಯಾ ಮಗಾ, 'ಹೋಗು ಆಡ್ಕೊ ಹೋಗು' ಅನ್ನುತ್ತಿದ್ದರು.
ಬಹುಶಃ ಇಂತಹ ಘಟನೆಗಳು ನನಗೆ ಜೀವನದಲ್ಲಿ ತಾಳ್ಮೆ ಕಲಿಸಿತ್ತು. ಹಾಗಾಗಿ 'ನಾನಾಯ್ತು, ನನ್ನ ಕೆಲಸವಾಯ್ತು' ಅನ್ನೋದು ನನ್ನ ಜೀವನದ ಒಂದು ಭಾಗವಾಗಿ ಪರಿಣಮಿಸಿತು.
ಎಲ್ಲ ಮಕ್ಕಳಿಗೂ ಉನ್ನತ ಶಿಕ್ಷಣಕೊಟ್ಟು, ಅವರವರ ಕಾಲಮೇಲೆ ಸ್ವಾವಲಂಬಿಯಾಗಿ ನಿಲ್ಲುವಂತೆ, ಎಲ್ಲರಿಗೂ ನೌಕರಿಯನ್ನು ದೊರಕಿಸಿಕೊಟ್ಟು, ಒಳ್ಳೆಯ ಸಂಬಂಧ ಹುಡುಕಿ ಮದುವೆ ಮಾಡಿ ತಮ್ಮ ಕರ್ತವ್ಯವನ್ನು ಪೂರ್ಣಗೊಳಿಸಿದ,ಸ್ವಾರ್ಥರಹಿತ ಜವಾಬ್ದಾರಿಯುತ ತಂದೆ.
ಅವರದು ಅತ್ಯಂತ ಸರಳ ಜೀವನವಾಗಿತ್ತು. ತನಗಾಗಿ ಕೇವಲ ಎರಡು ಜೊತೆ ಉಡುಪು ಮತ್ತು ಪಾದರಕ್ಷೆ ಅಷ್ಟೆ. ಉಳಿದೆಲ್ಲವನ್ನು ತನ್ನ ಮಕ್ಕಳ ಉನ್ನತಿಗಾಗಿ ಧಾರೆಯೆರೆದ ಮಹಾನ್ ತ್ಯಾಗಿ ನನ್ನ ತಂದೆ. ನಮ್ಮೆಲ್ಲರಲ್ಲೂ ಉತ್ತಮ ನಡವಳಿಕೆ ರೂಪಿಸಿಕೊಟ್ಟ ಮಾರ್ಗದರ್ಶಿ.
ನಾವೆಲ್ಲರೂ ಇಂದು ನಿರೀಕ್ಷೆಗೂ ಮೀರಿದ ಅತ್ಯುತ್ತಮ ಜೀವನ ನಡೆಸುತ್ತಿದ್ದೇವೆ. ಸಮಾಜದಲ್ಲಿ ಗೌರವ, ಮನೆಯಲ್ಲಿ ಪ್ರೀತಿ ವಿಶ್ವಾಸದ ಬದುಕು ನಮ್ಮೆಲ್ಲರದಾಗಲು ನನ್ನ ತಂದೆ ಹಾಕಿಕೊಟ್ಟ ಮಾರ್ಗದರ್ಶನವೇ ಕಾರಣ.
ಒಬ್ಬ ತಂದೆ ಇಷ್ಟೆಲ್ಲಾ ಸಾಧನೆ ಹೇಗೆ ಮಾಡಿದರು ಎಂಬುದು ನನ್ನ ಅರಿವಿಗೆ ನಿಲುಕದು.ಹಾಗಾಗಿ ನನ್ನ ತಂದೆ ಎಂಬ ಮಾಂತ್ರಿಕ ನಿಜವಾಗಿಯೂ ಕೋಟಿಗೊಬ್ಬರು. ಆ ತಂದೆ ಇನ್ನಿಲ್ಲವಾದರೂ ಅವರ ನೆನಪು ಮನದಲ್ಲಿ ಅಚ್ಚಳಿಯದೆ ನೆಲೆನಿಂತಿದೆ.
Indu Naik
ಸರಕಾರಿ ಕೆಲಸ ಮಾಡುತ್ತಿದ್ದರೂ ರಜಾ ದಿನಗಳಲ್ಲಿ ನನ್ನ ತಾಯಿಗೆ ಕೆಲಸದಲ್ಲಿ ನೆರವಾಗುತ್ತಿದ್ದರು. ಚಿಕ್ಕಮಕ್ಕಳಾದ ನಮಗೆ ಸ್ನಾನ ಮಾಡಿಸುವಾಗ ತುಂಬಾ ಕಷ್ಟವಾಗುತ್ತಿತ್ತಂತೆ.
ಆಗೆಲ್ಲ ಕಾಗದದಿಂದ ಪಾಕೀಟುಗಳನ್ನು ಮಾಡಿ ಒಬ್ಬೊಬ್ಬರ ಕೈಯಲ್ಲಿ ಒಂದೊಂದು ಜೊತೆ ಪಾಕೀಟು ಕೊಟ್ರೆ ಮುಗಿತು ಮಕ್ಕಳ ರಂಪ ಅಲ್ಲಿಗೆ ನಿಂತು ಹೋಗುತ್ತಿತ್ತು. ಅಬ್ಬಾ! ಅವರಲ್ಲಿಯ ತಾಳ್ಮೆ ಮೆಚ್ಚಬೇಕು.
ಆಯಿ -ಪಾಕೀಟು ಸಾದಾ-ಸರಳವಾಗಿತ್ತು. ದಾದಾನ ಪಾಕೀಟು ಅಂದ್ರೆ ಅದಕ್ಕೆ ಮಡಿಚಲು ಒಂದು ವಿಶೇಷ ಹೊರ ಮಡಿಕೆ ಇರುತ್ತಿತ್ತು. ಈ ಪಾಕೀಟುಗಳೇ ನಮಗೆ ಆಟಿಕೆಗಳಾಗಿದ್ದವು.
ಇನ್ನೊಂದು ಸ್ವಾರಸ್ಯಕರ ಘಟನೆ ನಾನು ಇಂದಿಗೂ ಮರೆತಿಲ್ಲ. ಶಾಲೆಯಿಂದ ಸಾಯಂಕಾಲ ಮನೆಗೆ ಬಂದರೆ ಓದಿಗೆ ಕುಳಿತುಕೊಳ್ಳಬೇಕಾಗುತ್ತಿತ್ತು. ಬಹಳ ಸಮಯ ಕರೆಂಟ್ ಇರುತ್ತಿರಲಿಲ್ಲ.ಅದಕ್ಕೆ ಬದಲಾಗಿ ಲಾಟೀನು ಇತ್ತು. ಅದಕ್ಕೆ ಫಳ-ಫಳ ಹೊಳೆಯುವ ಗ್ಲಾಸು ಇತ್ತು.
ಉರಿಯುವ ಲಾಟೀನು ತಂದು ನಮ್ಮ ಮಧ್ಯದಲ್ಲಿಟ್ಟು ಅದರ ಸುತ್ತಲೂ ವರ್ತುಲಾಕಾರವಾಗಿ ಕುಳಿತು ಓದಿಕೊಳ್ಳಲು
ನಮಗೆ ಹೇಳಿ ನಮ್ಮ ತಾಯಿ ತಮ್ಮ ಕೆಲಸಕ್ಕೆ ಹೋಗುತ್ತಿದ್ದರು.
ನಾವು ಓದುವಾಗ ಒಬ್ಬೊಬ್ಬರೇ ಆ ಲಾಟೀನನ್ನು ನಮ್ಮ ಕಡೆಗೆ ಹೆಚ್ಚುಬೆಳಕು ಬೀರಬೇಕೆಂದು ತಿರುಗಿಸುತ್ತಿದ್ದೆವು.ಅದಕ್ಕೆ ಚಿಕ್ಕ-ಪುಟ್ಟ ಪಿಸುಮಾತಿನಲ್ಲಿ ಜಗಳ ಸುರು ಆದ್ರೆ ನಮ್ಮ ತಾಯಿ ತಂದೆಯನ್ನು ಕರೆಯುತ್ತಿದ್ದರು.
ಆಗ ನನ್ನ ತಂದೆ ಏನೂ ಮಾತನಾಡದೆ ಒಂದು ಸಲ ಆ ಲಾಟೀನನ್ನು ಎತ್ತಿ ಎಲ್ಲರಿಗೂ ಅನುವಾಗುವಂತೆ ಮಧ್ಯದಲ್ಲಿಟ್ಟು ಒಮ್ಮೆ ನಮ್ಮನ್ನೆಲ್ಲಾ ನೋಡಿ ಹೋಗುತ್ತಿದ್ದರು.ತಂದೆ ಇಟ್ಟಮೇಲೆ ಮುಗಿತು.ನಮಗೆ ಹೆಚ್ಚುಬೆಳಕು ಇರಲಿ,ಕಡಿಮೆ ಬೆಳಕು ಇರಲಿ ಅಥವಾ ಬೆಳಕು ಇರದೇಇರಲಿ ತುಟಿ ಪಿಟಕ್ ಎನ್ನದೆ ಕುಳಿತು ಓದುತ್ತಿದ್ದೆವು.ತಂದೆ ಎಂದರೆ ಮಕ್ಕಳೆಲ್ಲರಿಗೂ ಅಪಾರವಾದ ಗೌರವವಿತ್ತು.
ಇದಕ್ಕಿಂತ ಇನ್ನೂ ಹೆಚ್ಚು ಸ್ವಾರಸ್ಯಕರವಾದ ಇನ್ನೊಂದು ಘಟನೆ ಎಂದರೆ ಚಿಕ್ಕವಳಿದ್ದಾಗ ನಾನು ಬಹಳ ತುಂಟಿಯಾಗಿದ್ದೆನಂತೆ. ನನ್ನ ತಾಯಿ ಹೇಳುತ್ತಿದ್ದರು.
ಮಕ್ಕಳು ಬಹಳ ಸಮಯ ಶಾಲೆಯಲ್ಲಿ ಕಳೆಯುತ್ತಿದ್ದರಿಂದ ಎಲ್ಲರನ್ನೂ ನಿಯಂತ್ರಿಸುವ ಸಮಸ್ಯೆ ಉಳಿದ ದಿನಗಳಲ್ಲಿ ಇರುತ್ತಿರಲಿಲ್ಲ.
ಆದರೆ ಭಾನುವಾರ ಬಿಡುವಿನ ದಿನ.ನನ್ನ ತಂದೆ ಮಧ್ಯಾಹ್ನದ ಊಟ ಮುಗಿಸಿ, ಸ್ವಲ್ಪ ವಿರಮಿಸಲು ಹೋಗುವಾಗ, ನನ್ನ ತಾಯಿ ನನ್ನನ್ನು ಸಂಭಾಳಿಸುವುದು ಕಷ್ಟ ಎಂದು ತಂದೆಯ ಜೊತೆ ಇರಲು ಹೇಳುತ್ತಿದ್ದರು.
ಆ ಸಮಯದಲ್ಲೆಲ್ಲ ನನ್ನ ತಂದೆ ನನಗೆ "ನಾನು ಮಲಗಿ ಏಳುವವರೆಗೂ ನೀನು ಇಲ್ಲೇ ನನ್ನ ಕಾಲ ಬಳಿ ಕುಳಿತಿರಬೇಕು ಎದ್ದು ಹೋಗಬಾರ್ದು" ಎನ್ನುತ್ತಿದ್ದರು.ತಂದೆಯ ಮಾತು ನಮಗೆ ವೇದ-ವಾಕ್ಯ ಇದ್ದಂತೆ. ಶಿರಸಾವಹಿಸಿ ಪಾಲಿಸುತ್ತಿದ್ದೆವು.
ಅವರು ಹತ್ತೇ ನಿಮಿಷ ಮಲಗಲಿ,ಇಲ್ಲವೆ ಒಂದು ತಾಸು ಮಲಗಲಿ, ಅಲ್ಲಿಯವರೆಗೂ ವಿಧೇಯಳಾಗಿ ಸುಮ್ಮನೆ ಕುಳಿತಿರುತ್ತಿದ್ದೆ.
ತಂದೆ ಎಚ್ಚೆತ್ತಾಗ ಅವರಿಗೆ ಮರೆತೇ ಹೋಗಿರ್ತಿತ್ತು. ಅರೆ, ನೀನು ಇಲ್ಲಿಯೇ ಕುಳಿತಿದ್ದಿಯಾ ಮಗಾ, 'ಹೋಗು ಆಡ್ಕೊ ಹೋಗು' ಅನ್ನುತ್ತಿದ್ದರು.
ಬಹುಶಃ ಇಂತಹ ಘಟನೆಗಳು ನನಗೆ ಜೀವನದಲ್ಲಿ ತಾಳ್ಮೆ ಕಲಿಸಿತ್ತು. ಹಾಗಾಗಿ 'ನಾನಾಯ್ತು, ನನ್ನ ಕೆಲಸವಾಯ್ತು' ಅನ್ನೋದು ನನ್ನ ಜೀವನದ ಒಂದು ಭಾಗವಾಗಿ ಪರಿಣಮಿಸಿತು.
ಎಲ್ಲ ಮಕ್ಕಳಿಗೂ ಉನ್ನತ ಶಿಕ್ಷಣಕೊಟ್ಟು, ಅವರವರ ಕಾಲಮೇಲೆ ಸ್ವಾವಲಂಬಿಯಾಗಿ ನಿಲ್ಲುವಂತೆ, ಎಲ್ಲರಿಗೂ ನೌಕರಿಯನ್ನು ದೊರಕಿಸಿಕೊಟ್ಟು, ಒಳ್ಳೆಯ ಸಂಬಂಧ ಹುಡುಕಿ ಮದುವೆ ಮಾಡಿ ತಮ್ಮ ಕರ್ತವ್ಯವನ್ನು ಪೂರ್ಣಗೊಳಿಸಿದ,ಸ್ವಾರ್ಥರಹಿತ ಜವಾಬ್ದಾರಿಯುತ ತಂದೆ.
ಅವರದು ಅತ್ಯಂತ ಸರಳ ಜೀವನವಾಗಿತ್ತು. ತನಗಾಗಿ ಕೇವಲ ಎರಡು ಜೊತೆ ಉಡುಪು ಮತ್ತು ಪಾದರಕ್ಷೆ ಅಷ್ಟೆ. ಉಳಿದೆಲ್ಲವನ್ನು ತನ್ನ ಮಕ್ಕಳ ಉನ್ನತಿಗಾಗಿ ಧಾರೆಯೆರೆದ ಮಹಾನ್ ತ್ಯಾಗಿ ನನ್ನ ತಂದೆ. ನಮ್ಮೆಲ್ಲರಲ್ಲೂ ಉತ್ತಮ ನಡವಳಿಕೆ ರೂಪಿಸಿಕೊಟ್ಟ ಮಾರ್ಗದರ್ಶಿ.
ನಾವೆಲ್ಲರೂ ಇಂದು ನಿರೀಕ್ಷೆಗೂ ಮೀರಿದ ಅತ್ಯುತ್ತಮ ಜೀವನ ನಡೆಸುತ್ತಿದ್ದೇವೆ. ಸಮಾಜದಲ್ಲಿ ಗೌರವ, ಮನೆಯಲ್ಲಿ ಪ್ರೀತಿ ವಿಶ್ವಾಸದ ಬದುಕು ನಮ್ಮೆಲ್ಲರದಾಗಲು ನನ್ನ ತಂದೆ ಹಾಕಿಕೊಟ್ಟ ಮಾರ್ಗದರ್ಶನವೇ ಕಾರಣ.
ಒಬ್ಬ ತಂದೆ ಇಷ್ಟೆಲ್ಲಾ ಸಾಧನೆ ಹೇಗೆ ಮಾಡಿದರು ಎಂಬುದು ನನ್ನ ಅರಿವಿಗೆ ನಿಲುಕದು.ಹಾಗಾಗಿ ನನ್ನ ತಂದೆ ಎಂಬ ಮಾಂತ್ರಿಕ ನಿಜವಾಗಿಯೂ ಕೋಟಿಗೊಬ್ಬರು. ಆ ತಂದೆ ಇನ್ನಿಲ್ಲವಾದರೂ ಅವರ ನೆನಪು ಮನದಲ್ಲಿ ಅಚ್ಚಳಿಯದೆ ನೆಲೆನಿಂತಿದೆ.
Indu Naik
ಚೆನ್ನಾಗಿದೆ.ದಾದಾರವರ ವ್ಯಕ್ತಿತ್ವವೇ ಕಣ್ಣೆದುರು ಬಂದಂತಾಯಿತು.ತಂದೆ ಎಂಬ ಪದದ ಬಳಕೆಯ ಸಮಯದಲ್ಲಿ ಒಂದು ಕಡೆಯಾದರೂ ದಾದಾ ಎಂಬ ಪದ ಬಳಸಿದ್ದರೆ ಇನ್ನೂ ಅಪ್ಯಾಯಮಾನವಾಗಿರುತ್ತಿತ್ತೇನೋ. ದಾದಾ ಉಪಯೋಗಿಸುತ್ತಿದ್ದ ಛತ್ರಿಯ ನೆನಪಾಯಿತು.
ReplyDeleteSuperb.....keep writing indumami...
ReplyDeletethrough your scribbling a homage to your father. Chikkavriddagina tuntat innu onto? ska
ReplyDeleteIt is a great respect that you have shown through your writing where you have very nicely brought out memories of childhood. ska
ReplyDelete