Machine Translate:

Till I translate the Kannada Posts, please find the broken machine translation done by Google Translator. [ It is very bad though! :( ]

Sunday, June 29, 2014

ಹೀಗೊಂದು ಪ್ರೇಮ ಕಥೆ-ಸಂಚಿಕೆ-೩



ಹೀಗೊಂದು ಪ್ರೇಮ ಕಥೆ

ಸಂಚಿಕೆ-೩

ಜ್ಯೋತಿಕಾಳ ಮದುವೆ ಬಂದೇ ಬಿಟ್ಟಿತು. ನನ್ನ ನೌಕರಿ ಕೆಲಸ ಬಿಟ್ಟರೆ ಮತ್ತೆಲ್ಲಿಯೂ ನಾನು ಒಂಟಿಯಾಗಿ ಹೋಗಲು ಇಷ್ಟ ಪಡುತ್ತಿರಲಿಲ್ಲ. ನನ್ನ ಪತಿಯ ಜೊತೆಗೆ ಹೊರಗೆ ಹೊಗುವುದೆಂದರೆ ನನಗೆ ಬಲು ಖಷಿ. ಆದರೆ ಇವರಿಗೆ ಮದುವೆ ಸಮಾರಂಭಗಳಿಗೆ ಹೋಗುವುದೆಂದರೆ ಎಲರ್ಜಿ. ಆದರೂ ಜ್ಯೋತಿಕಾಳ ಮದುವೆ ತಪ್ಪಿಸಲು ನನಗೆ ಇಷ್ಟವಾಗಲಿಲ್ಲ. ಹೋಗಲೇಬೇಕೆಂದು ನಿರ್ಧರಿಸಿದೆ.

ನನ್ನ ಪತಿ ಹೇಳಿದಂತೆ ಒಂದು ವೆಹಿಕಲ್ ಮಾಡಿಕಂಡು ನನ್ನ ಅಕ್ಕ-ಪಕ್ಕದಲ್ಲಿರುವ ಸಂಬಂಧಿಕರು ಹಾಗೂ ಸ್ನೇಹಿತೆಯರೊಡನೆ ಸಮುದಾಯ ಭವನದಲ್ಲಿರುವ ಕಲ್ಯಾಣ ಮಂಟಪದಲ್ಲಿ ನಡೆಯುವ ಮದುವೆಗೆ ಹೊರಟೆ.

 ಕಲ್ಯಾಣ-ಮಂಟಪದಲ್ಲಿ ಜನರು ಕಿಕ್ಕಿರಿದಿದ್ದರು. ಕುಳಿತು ಕೊಳ್ಳಲು ಜಾಗವಿರಲಿಲ್ಲ. ಅಲ್ಲೊಂದು ಇಲ್ಲೊಂದು ಕುರ್ಚಿ ಇದ್ದುದರಿಂದ ಎಲ್ಲರೂ ಒಟ್ಟಿಗೆ ಕುಳಿತುಕೊಳ್ಳಲಾಗಲಿಲ್ಲ.

 

ಅಲ್ಲಿ ವಧು-ವರರ ಹೆಸರನ್ನು ನೋಡಿ ನಾನು ದಂಗಾದೆ. ವಧುವಿನ ಹೆಸರು‘ಚಂದ್ರಿಕಾ’ ವರನ ಹೆಸರು ‘ಚಿದಾನಂದ’ ಎಂದಿತ್ತು.

 “ಏನಿದು,ಇಂದು ಜ್ಯೋತಿಕಾಳ ಮದುವೆಯಲ್ಲವೇ? ಯಾರನ್ನು ಕೇಳುವುದು? ಎಂದು ಪಕ್ಕಕ್ಕೆ ತಿರುಗಿದೆ. ಪರಿಚಿತಳಾದ ರೋಹೀಣಿ ಕಣ್ಣಿಗೆ ಬಿದ್ದಳು.

 ಅವಳನ್ನು ಕೇಳಿದಾಗ,“ಅಯ್ಯೋ ಮೇಡಂ,ನಿಮಗೆ ಗೊತ್ತಿಲ್ವಾ?  ಜ್ಯೋತಿಕಾ ಊರಿಗೆ ಬಂದು ಒಂದು ವಾರ ಆಯಿತು. ತನ್ನ ಮದುವೆಯ ಬಗ್ಗೆ  ಮತ್ತೆ ತಾಯಿಯ ಮನವೊಲಿಸಲು ಮನೆಗೆ ಹೋದಾಗ ಇವಳ ಮಾತನ್ನು ಕೇಳಲು ತಯಾರಿಲ್ಲದ  ತಾಯಿ ಇವಳ ತೋಳನ್ನು ಹಿಡಿದೆಳೆದು ಹೊಡೆಯುತ್ತಾ ಮನೆಯಿಂದ ಹೊರಗೆ ಹಾಕಿದ್ದಳಂತೆ ನಿನಗೂ ಈ ಮನೆಗೂ ಯಾವ ಸಂಬಂಧವೂ ಇಲ್ಲ ಎನ್ನುತ್ತ”.

ಇದನ್ನು ಕೇಳಿ ನನ್ನ ಕರುಳು ಚುರಕ್ ಎಂದಿತು. ತಾಯಿ ‘ಕ್ಷಮಯಾ ಧರಿತ್ರೀ’ ಎನ್ನುತ್ತಾರೆ. ಕ್ಷಮಾ ಗುಣ ಇರುವುದೇ ತಾಯಿಯಲ್ಲಿ.! ಈ ಮಾತಿಗೆ ಜ್ಯೋತಿಕಾಳ ತಾಯಿ ಅಪವಾದ ಎನಿಸಿತು . ಬೆಳೆದ  ಮಕ್ಕಳೊಂದಿಗೆ ಸ್ನೇಹಿತನಂತೆ ವರ್ತಿಸು ಎನ್ನುವುದೂ ಇವರಿಗೆ ತಿಳಿಯದಾಯಿತೇ?

“ಅದಾದ ನಂತರ ಜ್ಯೋತಿಕಾ ಶೇಖರ್-ದಂಪತಿಗಳ ಮನೆಯಲ್ಲಿ ಉಳಿದು ಕೊಂಡಳು ಮೇಡಂ. ಈ ದಿನ  ಹೆಣ್ಣಿನ ಮನೆಯ ಮದುವೆ -ದಿಬ್ಬಣ ಹೊರಟಿದ್ದೂ ಅವರ ಮನೆಯಿಂದಲೇ. ಅವರು  ತುಂಬಾ ಒಳ್ಳೆ ಜನ ನಿಮಗೆ ಗೊತ್ತಲ್ಲ ಮೇಡಂ.”  ಎಂದಳು.

ಶೇಖರ್-ದಂಪತಿಗಳು ಶ್ರೀಮಂತರಾದರೂ ಸೊಕ್ಕಿಲ್ಲದವರು. ದಯಾಳುಗಳು.

ಅಸಹಾಯಕರಿಗೆ ಸಹಾಯ ಮಾಡುವದರಲ್ಲಿ ಸಿದ್ಧ-ಹಸ್ತರು. ಅವರ ದೊಡ್ಡ ಗುಣಕ್ಕೆ ಮನಸ್ಸಿನಲ್ಲಿಯೇ ವಂದಿಸಿದೆ.

ರೋಹಿಣಿ ಅಷ್ಟಕ್ಕೇ ಸುಮ್ಮನಿರದೆ ಮಾತು ಮುಂದುವರೆಸಿದಳು.  ಜ್ಯೋತಿಕಾಳನ್ನು ಸಂಪೂರ್ಣವಾಗಿ ಸ್ವೀಕರಿಸಿದ ಗಂಡಿನ ಮನೆಯವರು ತಾವೇ ಖುದ್ದಾಗಿ ಮುಂದೆ ನಿಂತು

ಎರಡೂ ಕಡೆಯ ಖರ್ಚು-ವೆಚ್ಚ, ಉಟೋಪಚಾರ ಎಲ್ಲವನ್ನೂ ನೋಡಿ ಕೊಂಡಿದ್ದಾರೆ ಎಂದು

ತಿಳಿದಾಗ ಜ್ಯೋತಿಕಾ ಅದೃಷ್ಟವಂತೆ ಎನಿಸಿತು.

 ಅವಳ ಹೆಸರನ್ನೂ ಬದಲಾಯಿಸಿ ‘ಚಂದ್ರಿಕಾ’ಎಂದು ನಾಮಕರಣ ಮಾಡಿ ಆಮಂತ್ರಣ-ಪತ್ರಿಕೆಯಲ್ಲಿ ಹೆಸರನ್ನು ನಮೂದಿಸಿದ್ದಾರೆ ಎಂದು ಅರಿತಾಗ  ಗಂಡಿನ ಮನೆಯವರ

ದೊಡ್ಡ ತನಕ್ಕೆ ಹೆಮ್ಮೆಪಟ್ಟೆ.

ಮದುವೆಗೆ ಬಂದ ಜನ ಸಮೂಹದಲ್ಲಿ ಹೆಚ್ಚಿನವರು ಸುಶಿಕ್ಷಿತರೇ ಆಗಿದ್ದರು. ವಿವಿಧ ಇಲಾಖೆ-

ಯಲ್ಲಿ ನೌಕರಿ ಮಾಡುವವರು, ಉನ್ನತ-ಹುದ್ದೆಯಲ್ಲಿ ಇರುವವರು.

ಮಂಟಪದಲ್ಲಿ ಕುಳಿತ ಚಂದ್ರಿಕಾಳನ್ನ ನೋಡಿ , ರೋಹಿಣಿ ಮತ್ತೆ ಮಾತಿಗಾರಂಭಿಸಿದಳು.

“ ನೋಡಿ ಮೇಡಂ, ಹುಡುಗಿ ಮೂವತ್ತು ವರ್ಷ ಮೇಲ್ಪಟ್ಟವಳಾದರೂ ದಂತದ ಬೊಂಬೆಯಂತೆ ಕಾಣುತ್ತಿದ್ದಾಳೆ. ಹುಡುಗಿಯನ್ನು ಅವಳ  ಸಂಭಂದಿಕರು ಧಾರೆಯೆರೆದು ಕೊಡುತ್ತಿದ್ದಾರೆ.

 ಹುಡುಗ ನೋಡಿ ಮೇಡಂ, ನೋಡಲು ಸುಮಾರಾಗಿದ್ದರೂ ಒಳ್ಳೆಯ ಗುಣದವನಂತೆ. ಜ್ಯೋತಿಕಾಳನ್ನು ತುಂಬಾ ಪ್ರೀತಿಸುತ್ತಾನಂತೆ.

ಅಲ್ನೋಡಿ ಮೇಡಂ, ಹುಡುಗನ ಬದಿಯಲ್ಲಿ  ನೀಟಾಗಿ ಡ್ರೆಸ್ ಮಾಡಿಕೊಂಡು

 ಹೆಗಲ ಮೇಲೆ ಬಿಳಿದಾದ ಶಾಲ್ ಹಾಕಿಕೊಂಡು ನಿಂತವರು ಹುಡುಗನ ತಂದೆ. ಪಕ್ಕದಲ್ಲಿ ಹಸಿರು-ಕೆಂಪು ಬಣ್ಣದ ರೇಷ್ಮೆ ಸೀರೆಯುಟ್ಟು ನಿಂತವಳು ಹುಡುಗನ ತಾಯಿ. ಆ ಕಡೆ ಮೆರುನ್ ಬಣ್ಣದ ಸೀರೆಯುಟ್ಟು ಸುಂದರ  ಯುವತಿ ನಿಂತಿದ್ದಾಳಲ್ಲ  ಮೇಡಂ, ಅವಳು ಹುಡುಗನ ಅಕ್ಕ.  ಅವಳೂ ಇಂಜಿನಿಯರ್ ಅಂತೆ....ರೋಹಿಣಿಯ  ಮಾತು ಬ್ರೇಕ್ ಇಲ್ಲದೆ ಮುಂದೆ ಸಾಗಿತ್ತು.

ಒಂದು ಕ್ಷಣ ನಾನೂ ಯೋಚಿಸಿದೆ.

ಎಲ್ಲರೂ ಸಂತೋಷದಿಂದ ಈ ಮಂಗಳ ಕಾರ್ಯದಲ್ಲಿ ಭಾಗಿ ಯಾಗಿರುವಾಗ ಹುಡುಗ ಕೇವಲ ಪರ ಜಾತಿ ಎಂದು ಸಂಕುಚಿತ ಮನಸ್ಸಿನ ತಂದೆ-ತಾಯಿಗಳು ದೂರವಿದ್ದದ್ದು ಖಂಡನೀಯ. ಅವರಿಷ್ಟದಂತೆ ಮದುವೆ ಮಾಡಿದ್ದರೂ ಇಷ್ಟು ಒಳ್ಳೆಯ ಪತಿ ಚಂದ್ರಿಕಾಳಿಗೆ ಸಿಗುತ್ತಿರಲಿಲ್ಲ ಎನಿಸಿತು.

ಊಟಕ್ಕೆ ಕುಳಿತಾಗ ಹುಡುಗನ ಕಡೆಯವರು ಬಂದು “ನಿಧಾನ ಊಟಮಾಡಿ ”ಎನ್ನುತ್ತ  ಪ್ರತಿ

ಯೊಬ್ಬರನ್ನು ವಿಶ್ವಾಸದಿಂದ ವಿಚಾರಿಸಿಕೊಂಡರು. ತಾಂಬೂಲ ಉಡುಗೊರೆಯನ್ನಿತ್ತು ಸತ್ಕರಿಸಿದರು.

ಇನ್ನೇನು ಮನೆಗೆ  ತಿರುಗಿ ಹೊರಡಬೇಕು ಎನ್ನುವಷ್ಟರಲ್ಲಿ ಮತ್ತೆ ರೋಹಿಣಿ ಪ್ರತ್ಯಕ್ಷಳಾದಳು. ಮೇಡಂ, ತಪ್ಪು ತಿಳಿಯಬೇಡಿ, ಇನ್ನೊಂದು ವಿಷಯ ಹೇಳಲು ಮರೆತಿದ್ದೆ. ತಂದೆ-ತಾಯಿಯೇ ಮುಂದಾಗಿ  ನಿಂತು ಗಂಡು ನೋಡಿ ಮದುವೆ ಮಾಡಿದ ಶ್ವೇತಾಳನ್ನು ನೋಡಿದರೆ ಪಾಪ ಅನ್ಸುತ್ತೆ. ಮದುವೆಯಾಗಿ ಒಂದು ವರ್ಷವೂ ಸರಿಯಾಗಿ ಬಾಳ್ವೆ ಮಾಡಲಿಲ್ಲ.ಈಗ ಗಂಡ ಡೈವೋರ್ಸ್ ಕೊಟ್ಟಿದ್ದಕ್ಕೆ ತಾಯಿ ಮನೆ ಸೇರಿದ್ದಾಳೆ.” 

ಅವಳ ಮಾತಿಗೆ ನಾನು ಪ್ರತ್ಯುತ್ತರವಾಗಿ “ಹೌದೇ” ಎಂದು ಹುಬ್ಬೇರಿಸಿದೆ. ಅಷ್ಟೆ! ತಕ್ಷಣ ಅವಳು “ಬೇರೆಯವರ ಸುದ್ದಿ ನಮಗ್ಯಾಕೆ ಮೇಡಂ”ಎಂದು ಜಾಗ ಖಾಲಿ ಮಾಡಿದಳು.

 

ಮನಸ್ಸಿಗೆ ತುಂಬಾ ಕೆಟ್ಟೆನಿಸಿತು.ಮದುವೆಯ ನಂತರ ಚಂದ್ರಿಕಾ ಗಂಡನ ಮನೆಯಲ್ಲಿ ಎಲ್ಲರೊಡನೆ ಹೊಂದಿಕೊಂಡು ಖುಷಿಯಾಗಿದ್ದಾಳೆ ಎಂದು ತಿಳಿದಾಗ ಮನಸ್ಸು ಹಗುರವೆನಿಸಿತು.

ಒಂದು ಮಾತಂತು ನಿಜ.

ನಾಲ್ಕೈದು ವರ್ಷಗಳಿಂದಲೂ ತಂದೆ-ತಾಯಿಯರ ಅನುಮತಿಗಾಗಿ ಕಾಯುತ್ತ ಕೊನೆಗೂ ಅವರ ಅನುಮತಿ ಸಿಗದೆ ಇಷ್ಟಪಟ್ಟವನೊಡನೆ ಮದುವೆಯಾದ ಚಂದ್ರಿಕಾ ಅದೃಷ್ಟವಂತಳೆ ಸರಿ!

ತಾಯಿ-ತಂದೆಯರ ಇಷ್ಟದ ಪ್ರಕಾರ ನಡೆದು ಮದುವೆಗೆ ಒಪ್ಪಿಕೊಂಡ ಶ್ವೇತಾಳ ಜೀವನ ಏನಾಯ್ತು? ಗಂಡನಿಂದ ಡೈವೋರ್ಸ್!  ಪಾಪ ಶ್ವೇತಾಳಿಗೆ ಹಾಗಾಗಬಾರದಿತ್ತು. ನನ್ನ ಮನಸ್ಸು ವಿಲಿವಿಲಿ ಒದ್ದಾಡಿತು. ಇದೆಂತಹ ವಿಧಿ ವಿಪರ್ಯಾಸ!

                            

--------          ಮುಗಿಯಿತು--------           

 

 Indu Naik  

 

 

                                                                                     

 

Wednesday, June 25, 2014

ಹೀಗೊಂದು ಪ್ರೇಮ ಕಥೆ-ಸಂಚಿಕೆ-2

ಹೀಗೊಂದು ಪ್ರೇಮ ಕಥೆ
ಸಂಚಿಕೆ-2
 
ಜ್ಯೋತಿಕಾಳ ಬಗ್ಗೆ ನನ್ನ ನೆನಪು ಸುಮಾರು ಮೂವತ್ತು ವರ್ಷಕ್ಕೂ ಹಿಂದೆ ಸರಿದಿತ್ತು. ನನಗೆ ಬಹು ದೂರದ ಊರಿನಲ್ಲಿ ಹೊಸದಾಗಿ ಒಂದು ನೌಕರಿ ಸಿಕ್ಕಿತ್ತು. ನಾನು ಮತ್ತು ನನ್ನ ಗೆಳತಿ ಸಿಂಧು ಇಬ್ಬರೂ ಸೇರಿ ಒಂದು ಬಾಡಿಗೆ ಮನೆಯಲ್ಲಿ ವಾಸವಾಗಿದ್ದೆವು.
 
 ನಮ್ಮ ಮನೆಯ ಸ್ವಲ್ಪ ದೂರದಲ್ಲಿ ಸುಮಾರು ಹತ್ತು-ಹದಿನೈದು ಮನೆಗಳಾಚೆ ಜ್ಯೋತಿಕಾಳ ಮನೆಯಿತ್ತು. ಅವಳದು ಚಿಕ್ಕದಾದ ಮನೆ. ಮನೆ ಎನ್ನುವದಕ್ಕಿಂತಲೂ ಗುಡಿಸಲು ಎನ್ನುವದೇ ಹೆಚ್ಚು ಸೂಕ್ತ.
 
ತಂದೆ ಸೂರಪ್ಪ. ಸೌಮ್ಯ ಸ್ವಭಾವದವನು.ತಾಯಿ ಸುಭದ್ರಾ.ಬಲು ಘಾಟಿ ಹೆಂಗಸು. ಬಾಯಿಬಿಟ್ಟರೆ ಸಾಕು, ಅವಳ ಮಾತನ್ನು ಸುಮಾರಾಗಿ ಯಾರಿಂದಲೂ ನಿಯಂತ್ರಿಸಲು ಸಾಧ್ಯ ವಾಗುತ್ತಿರಲಿಲ್ಲ. ಹಾಗಾಗಿ ಎಲ್ಲರೂ ಅವಳಿಂದ ಆದಷ್ಟು ದೂರವೇ ಇರುತ್ತಿದ್ದರು.
 
 ಇವರಿಗೆ ಮೂರು ಮಕ್ಕಳು- ರವಿಂದ್ರ, ಜ್ಯೋತಿಕಾ ಮತ್ತು ಶ್ವೇತಾ ಅವರದು ಕಡು ಬಡತನ. ತಂದೆ ಸಂಸಾರದೂಗಿಸಲು ಚಿಕ್ಕ-ಪುಟ್ಟ ಕೆಲಸಗಳನ್ನು ಮಾಡುತ್ತಿದ್ದರು. ಮನೆಯ ಎದುರಿನ ಚಿಕ್ಕ ಕೈ-ತೋಟದಲ್ಲಿ ಹೂವು, ತರಕಾರಿ ಬೆಳೆಯುತ್ತಿದ್ದರು.
ಅದೃಷ್ಟವಶಾತ್ ಮಕ್ಕಳು ಕಲಿಯುವದರಲ್ಲಿ ಒಬ್ಬರಿಗಿಂತ ಒಬ್ಬರು ಚುರುಕು. ಪ್ರತಿ ದಿನ ಜ್ಯೋತಿಕಾ ಮತ್ತು ಶ್ವೇತಾಇಬ್ಬರೂ ಸೇರಿ ಅಲ್ಲಿಯೇ ಸನಿಹದಲ್ಲಿರುವ ಸುತ್ತು-ಮುತ್ತಲಿನ ಮನೆಗಳಿಗೆ ಹೋಗಿ ಹೂವು ಮತ್ತು ತರಕಾರಿ ಮಾರಾಟ ಮಾಡಿ ಶಾಲೆಗೆ ಹೋಗುತ್ತಿದ್ದರು.
 
 ನಾವೂ ಅವರಿಂದ ಪ್ರತಿದಿನ ಹೂವು ಮತ್ತು ತರಕಾರಿಗಳನ್ನು ಕೊಂಡು ಕೊಳ್ಳುತ್ತಿದ್ದೆವು. ಒಮ್ಮೊಮ್ಮೆ ನಮಗೆ ಅವಶ್ಯವಿಲ್ಲದಿದ್ದರೂ ಅವುಗಳನ್ನು ಕೊಂಡು ಕೊಳ್ಳುತ್ತಿದ್ದೆವು. ಯಾಕೆಂದ್ರೆ ಆ ಪುಟ್ಟ ಮಕ್ಕಳನ್ನು ಕಂಡರೆ ನಮಗೆ ಪಂಚ-ಪ್ರಾಣ. ಆ ವಟಾರದಲ್ಲಿ ಎಲ್ಲರಿಗೂ ಅವರು ಇಷ್ಟವಗುತ್ತಿದ್ದರು.ಆರೇಳು ವರ್ಷದ ನಂತರ ನನಗೆ ಬೇರೆ ಊರಿಗೆ ವರ್ಗವಾಯಿತು. ಆದರೆ ನನ್ನ ಗೆಳತಿ ಸಿಂಧು ಅಲ್ಲಿಯೇ ಇದ್ದಳು.
 
ನಾನು ಸಿಂಧುಳಿಗೆ ಭೆಟ್ಟಿಯಾಗಲು ಹೋದಾಗಲೆಲ್ಲ ಜ್ಯೋತಿಕಾ ಮತ್ತು ಶ್ವೇತಾರನ್ನು ತಪ್ಪದೇ ಭೇಟಿಯಾಗಿ ಬರುತ್ತಿದ್ದೆ.ಹಾಯ್ ಸ್ಕೂಲ್ ಮುಗಿಸಿ ಕಾಲೇಜಗೆ ಹೋಗುವಾಗ್ಲೂ  ಮನೆ-ಮನೆಗೆ ಹೋಗಿ ಹೂವು,ತರಕಾರಿ ಮಾರಾಟ ಮಾಡುವುದನ್ನು  ಈ ಮಕ್ಕಳು ತಪ್ಪಿಸುತ್ತಿರಲಿಲ್ಲ. ದೊಡ್ಡವರಾದ್ದರಿಂದ ಒಂದು ಸೈಕಲ್ ನ್ನು ಖರೀದಿಸಿದ್ದರು. ಸೈಕಲ್ ಮೇಲೆ ಬಹು ದೂರದ ಮನೆಗಳಿಗೆ ಹೋಗಿ  ಮಾರಾಟ ಮಾಡಿ ಬಂದು ಅವರು ಕಾಲೇಜಿಗೆ ಹೋಗುವುದನ್ನು ನಾನು ಕಣ್ಣಾರೆ ಕಂಡಿದ್ದೇನೆ.ಅವರ ಶ್ರಮ ಗೌರವ ನನಗೆ ತುಂಬಾ ಹಿಡಿಸಿತ್ತು.
 
ನಾನು ಅವರಿಗೆ ಕಲಿಸಿರಲಿಲ್ಲ. ನಾನು ಕೆಲಸ ಮಾಡುವ ಕಾಲೇಜು ಬಹು ದೂರದಲ್ಲಿತ್ತು. ಸುಮಾರು ಇಪ್ಪತ್ತೈದು ವರ್ಷದ ವರೆಗೂ ಆ ವಟಾರದಲ್ಲಿಯೇ ಇದ್ದರು. ತದ ನಂತರ ಎಕ್ಷಟೆನ್ಶನ್ ಏರಿಯಾದಲ್ಲಿ ಒಂದು ಪುಟ್ಟ ಮನೆ ಕಟ್ಟಿಕೊಂಡು ಅಲ್ಲಿ ವಾಸವಾಗಿದ್ದರಂತೆ.
 
ವರ್ಷವೇ ಉರುಳಿತು. ಒಮ್ಮೆ ಸಿಂಧೂಳ ಮನೆಯಲ್ಲಿದ್ದಾಗ ಶ್ವೇತಾ ಸ್ಕೂಟಿ ಹೊಡೆದುಕೊಂಡು  ಬಂದಿದ್ದಳು.  “ಜ್ಯೋತಿಕಾ ಎಂ. ಎಸ್.ಸಿ. ಮುಗಿಸಿ ಬೆಂಗಳೂರಿನಲ್ಲಿ ಕಂಪನಿಯಲ್ಲಿ ನೌಕರಿ ಮಾಡುತ್ತಿದ್ದಾಳೆ. ನಾನು ಬಿ. ಎ.  ಮುಗಿಸಿ ಕಂದಾಯ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದೇನೆ. ರವಿಂದ್ರ ನಿಗೆ ಮೆರಿಟ್- ಸೀಟ್  ಸಿಕ್ಕಿದ್ದರಿಂದ ಬಿ. ಇ. ಮುಗಿಸಿ ಇಂಜಿನಿಯರ್ ಆಗಿದ್ದಾನೆ ಎಂದು ಶ್ವೇತಾ  ಹೇಳಿದಾಗ ನನಗೆ ಖುಷಿಯಾಗಿತ್ತು.
 
ಅದಾದ ನಂತರ ಅವರ ಸುಳಿವಿರಲಿಲ್ಲ. ಮತ್ತೆ ಶ್ವೇತಾ ನಮ್ಮ ಮನೆಗೆ ಬಂದದ್ದು ಎರಡು ವರ್ಷದ ನಂತರ. ತನ್ನ ಮದುವೆಯ ಆಮಂತ್ರಣ-ಪತ್ರಿಕೆ ನನಗೆ ಕೊಟ್ಟು ನನ್ನನ್ನು ಮದುವೆಗೆ ಕರೆಯಲು ಬಂದಾಗ ನನ್ನ ಮನಸ್ಸಿಗೆ ಕಸಿವಿಸಿ ಎನಿಸಿತ್ತು
.“ಅಕ್ಕನ ಮದುವೆಯಾಗದೇ ನೀನು ತಂಗಿ ಮದುವೆ ಆಗ್ತಿದ್ದೀಯಾ?” ಎಂದು ಕೇಳಿದೆ. ಅದಕ್ಕೆ ಅವಳು, “ ಅಕ್ಕನಿಗೆ ಮದುವೆಯಾಗಲು ಇಷ್ಟವಿಲ್ಲವಂತೆ. ಅದಕ್ಕೆ ತಂದೆ-ತಾಯಿ ನನ್ನ ಮದುವೆಗೆ ಪ್ರಯತ್ನಿಸಿದ್ದಾರೆ.ನಾನು  ಮದುವೆಗೆ ಒಪ್ಪಿದ್ದೇನೆ.” ಎಂದಿದ್ದಳು
 
ಶ್ವೇತಾಳ ಮದುವೆಗೆ ಹೋದಾಗ ಅಕ್ಕ ಜ್ಯೋತಿಕಾ ಎಲ್ಲಿಯೂ ಕಂಡು ಬರಲಿಲ್ಲ. ಅವಳ ಬಗ್ಗೆ ಯಾರನ್ನೂ ಕೇಳಲಾಗದೇ ತೆಪ್ಪಗಾದೆ. ಮನೆಗೆ ಬಂದಾಗಲೂ  ನಾನು ಜ್ಯೋತಿಕಾಳ ಬಗ್ಗೆ ಯೋಚಿಸುತ್ತಿದ್ದೆ.  ಅವಳಿಗಾಗಿ ಮನಸ್ಸು ಮಮ್ಮಲ ಮರುಗಿತು.       
 
 
ಮುಂದುವರೆಯುವುದು....
                                                                            Indu Naik

Wednesday, June 18, 2014

ಹೀಗೊಂದು ಪ್ರೇಮ ಕಥೆ

ಹೀಗೊಂದು ಪ್ರೇಮ ಕಥೆ
ಸಂಚಿಕೆ-೧

ಅಂದು ಬೇಸಿಗೆಯ ಸಂಜೆ. ಬಿಡುವಿನ ಸಮಯ.ಹೊರ-ಕೋಣೆಯಲ್ಲಿದ್ದ ಸೋಫಾದ ಮೇಲೆ ನಾನು ವಿರಮಿಸಿದ್ದೆ. ಗುಲಾಬಿ ಬಣ್ಣದ ಚೂಡಿದಾರ್ ತೊಟ್ಟು ಸುಂದರ ಯುವತಿಯೋರ್ವಳು ಮನೆಯ ಕಂಪೌಂಡ್ ಗೇಟ್ ತೆಗೆದು ಒಳಗೆ ಬಂದಳು.

“ಮೇಡಂ, ಚೆನ್ನಾಗಿದ್ದೀರಾ?” ಎನ್ನುತ್ತಾ ಬಂದಾಗ ಥಟ್ಟನೆ ಅವಳ ಧ್ವನಿ ಗುರುತಿಸಲಾಗಲಿಲ್ಲ.ಮನೆಯ ಒಳಗೆ ಬಂದಾಗ ಮುಖ ನೋಡಿದೆ.

“ಅರೆ,ಜ್ಯೋತಿಕಾ, ಇಷ್ಟುದಿನ ಎಲ್ಲಿದ್ದೀಯಮ್ಮ? ಯಾವಾಗ ಊರಿಗೆ ಬಂದೆ? ಏನ್ಮಾಡ್ತಾ ಇದ್ದೀಯಾ?”  ಎಂದು ಕೇಳಿದೆ. ನನ್ನ ಪ್ರಶ್ನೆಗಳ ಸುರಿಮಳೆಗೆ ಉತ್ತರಿಸುವ ಆತಂಕ ಅವಳಲ್ಲಿ ಕಾಣಲಿಲ್ಲ.

ಅದಕ್ಕೆ ಬದಲಾಗಿ ಅವಳು, “ಮೇಡಂ, ನಾಳೆ ನನ್ನ ಮದುವೆ ಇದೆ. ಇಲ್ಲಿಯೇ ಸಮೀಪದ ಕಲ್ಯಾಣ ಮಂಟಪದಲ್ಲಿ. ನೀವು ಬಂದು ನನ್ನನ್ನು ಆಶೀರ್ವದಿಸಬೇಕು. ಸರ್ ಗೂ ಬರಲಿಕ್ಕೆ ಹೇಳಿ.” ಎಂದಳು.

“ಹೌದಾ? ವೆರಿ ಗುಡ್. ಕಾಂಗ್ರೇಟ್ಸ್!  ಆದ್ರೆ ಏನೇ ಇದು,ನಾಳೆ ಮದುವೆ ಇಟ್ಕೊಂಡು ಇವತ್ತು ಕರೀತಾ ಇದ್ದಿಯಲ್ಲಾ. ಮೊದಲು ಯಾಕೆ ತಿಳಿಸಲಿಲ್ಲ.” ಎಂದೆ. ಅವಳಲ್ಲಿ ಅಷ್ಟೋಂದು ವ್ಯವಧಾನ ಇದ್ದಂತೆ ಕಾಣಲಿಲ್ಲ.

“ಹೋಗ್ಲಿ ಬಿಡು” ಎಂದು ಅವಳ ಕೈಯನ್ನೇ ನೋಡ್ತಾ ಇದ್ದೆ. ಹೇಗೂ ಮದುವೆ ಆಮಂತ್ರಣ ಪತ್ರಿಕೆ ಕೊಡ್ತಾಳಲ್ಲ ನೋಡಿದರಾಯ್ತು ಅಂತ. ಆದರೆ ಆವಳು ತಕ್ಷಣ, “ನಮ್ಮದು ಪ್ರೇಮವಿವಾಹ ಮೇಡಂ ಹುಡುಗ ಬೆಂಗಳೂರಿನಲ್ಲಿ ಕಂಪನಿಯಲ್ಲಿ ಒಳ್ಳೆಯ ಕೆಲಸದಲ್ಲಿ ಇದ್ದಾನೆ. ಅವರ ತಂದೆ ಊರಿನ ಕಡೆಗೆ ನರ್ಸಿಂಗ್ ಕಾಲೇಜಿನಲ್ಲಿ ಪ್ರಿನ್ಸಿಪಾಲರಾಗಿದ್ದಾರೆ. ತಾಯಿ ಟೀಚರ್. ಅವರದು ಒಳ್ಳೆಯ ಮನೆತನ. ಅವರ ಮನೆಯವರೆಲ್ಲ ನನ್ನನ್ನುಸಂಪೂರ್ಣವಾಗಿ ಒಪ್ಪಿಕೊಂಡಿದ್ದಾರೆ. ಎಂದಳು.

 ಅದಕ್ಕೆ ನಾನು  “ದೆಟ್ಸ್ ಗುಡ್” ಎಂದೆ.”ಮತ್ತೆ  ನಿಮ್ಮ ತಂದೆ-ತಾಯಿ ಒಪ್ಪಿದ್ದಾರೆಯೇ?” ಅಂತ ಕೇಳಿದಾಗ ಸ್ವಲ್ಪ ತಡವರಿಸಿದಳು.

“ಇಲ್ಲ ಮೇಡಂ, ಹುಡುಗ ಬೇರೆ ಜಾತಿಯವನಾದ್ದರಿಂದ ನಮ್ಮ ಮನೆಯಲ್ಲಿ ಒಪ್ಪಲಿಲ್ಲ. ನಾನು ನನ್ನ ತಂದೆ-ತಾಯಿಯರ ಮನವೊಲಿಸಲು ನಾಲ್ಕು ವರ್ಷದಿಂದ ಪ್ರಯತ್ನಸಿದೆ. ಸಾಧ್ಯವಾಗಲಿಲ್ಲ. ಅವರಿಷ್ಟದಂತೆ ನನ್ನ ತಂಗಿಯ ಮದುವೆಯನ್ನೂ ಮಾಡಿದರು.  ಆದರೆ ನನ್ನ ಮದುವೆಗೆ ಅನುಮತಿ ನೀಡಲಿಲ್ಲ.” ಅವಳ ಮಾತಿನಲ್ಲಿ ದುಃಖವಿತ್ತು.

ಅವಳ ತಾಯಿಯ ಮುಖ ನನ್ನ ಕಣ್ಣ್ ಎದುರಿಗೆ ಬಂತು. ಬಹಳ ದುರಂಹಕಾರಿ ಎನಿಸಿತು. ಮಾತನ್ನು ಮುಂದುವರೆಸುತ್ತಾ ಜ್ಯೋತಿಕಾ ಹೇಳಿದಳು. “ ಹುಡುಗನ ಕಡೆಯವರು ಇನ್ವಿಟೇಶನ್ ಪ್ರಿಂಟ್ ಮಾಡಿದ್ದಾರೆ ಮೇಡಂ. ಆದರೆ ನನ್ನ ಕಡೆಯಿಂದ ಇಲ್ಲ. ಆದ್ದರಿಂದ ನಾನೇ ಸ್ವತಃ ಬಂದು ನಿಮ್ಮನ್ನು ಕರೀತಾ ಇದ್ದೀನಿ. ಈ ವಟಾರದಲ್ಲಿ ಎಲ್ಲರನ್ನೂ ಕರೆದು ಬರಬೇಕು. ಹಾಗಾಗಿ ಕುಳಿತು ಮಾತನಾಡಲು ಸಮಯವಿಲ್ಲ.” ಎಂದಳು. ಅವಳ ಮಾತು ಕೇಳಿ ತುಂಬಾ ಬೇಸರವೆನಿಸಿದರೂ ಅದನ್ನು ಅವಳ ಎದುರು ತೋರಗೊಡಲಿಲ್ಲ.

ಅವಳಿಗೆ ಸಕ್ಕರೆ ತಿನಿಸಿ, ಉಡಿ ತುಂಬಿ,ಹಾರೈಸಿ ಕಳಿಸಿದೆ.

ಮನಸ್ಸು ಚಡಪಡಿಸಿತು. ಎಷ್ಟೊಂದು ಒಳ್ಳೆಯ ಹುಡುಗಿ. ತಂದೆ-ತಾಯಿ ಯಾಕೆ ಒಪ್ಪಲಿಲ್ಲ. ಸುಶಿಕ್ಷಿತ-ಒಳ್ಳೆಯ ಮನೆತನದ ಹುಡುಗನಾದರೂ ಜಾತಿ ಅಡ್ಡ ಬಂದೀತೇ? ಎಂದು ಯೋಚಿಸಿದಾಗ ನನ್ನ ಮನದಲ್ಲಿ ಜ್ಯೋತಿಕಾಳ ಬಾಲ್ಯ ಜೀವನದ ನೆನಪಿನ ಸುರುಳಿ ತನ್ನಿಂದ ತಾನೇ ಬಿಚ್ಚಿಕೊಂಡಿತು.
                                                                                                ಮುಂದುವರೆಯುವುದು

                    Indu Naik

Saturday, June 14, 2014

Father's Day



Father’s Day

Today is June 15th. Father’s Day. Happy Father’s Day- to all fathers around the world.

I have seen children celebrating Mother’s Day in a grand manner. A few of them celebrate Father’s Day. Why is this difference? Mostly fathers are engaged with their work -outside as their area of work is larger, being in the midst of office, home, children, bank, life, insurance etc. they forget their birthdays.

 Father is the Super-Hero in a family. He has the biggest and loudest laugh that teaches his children to laugh through his tears and fears and the world will be a better place to live in. In parenting, his warmth, security, kindness, forgiveness, hope and eternal love make him strongest in the sight of children.

 When children watch their mother, they wonder where she gets her strength. It’s from father! He has that smile which cannot be replaceable on the whole earth. He forgets the mistakes and failures of grown-up children, stays cool and offers his children the strength to stand alone and face today’s challenges on their own. He is the special father. He is child’s real-life hero!

 Of course, from centuries, men are defined by their jobs. But in modern millennium, their roles they play as husbands and fathers are also becoming prominent. A father is guiding light whose love shows children their way. Someone rightly said, “A good father is one of the most unsung, unpraised, unnoticed and yet one of the most valuable assets in our society”.

Indu Naik

 

 

Monday, June 9, 2014

My Grandfather



My Grandfather

My grandfather was late Denga Naik. He was my mother’s father. Dharamma was my late grandmother. She had belonged to one of the oldest ancestral family of Hosbayya Naik, one of the leading personality of those days, lived in old Toppalakeri, in Honnavar Taluk. My mother was second eldest daughter of late Denga Naik. My mother had studied only up to seventh standard in those days. Her brothers and other younger sisters were more educated than her.

     My mother’s name was Devamma. After marriage my father had changed her name Manorama. My mother was fond of her father. At home my mother had taught all of us beginning with alphabets when we were small kids. Not only I even my other five sisters and one brother had learnt from her during childhood. My mother was our first teacher. In leisure time, at home she used to tell us wonderful and interesting things about my grandfather Denga Naik…..

He was very tall and handsome. Always he dressed neatly. He used to wear white shirt, white dothi and a long black over-coat, on the top that would cover up to his knee. He used to wear turbon over his head in a stylish way. He used to wear a tiny round alarm clock with a lengthy silver-chain placed in his coat-pocket, entangled the other end of the chain to his coat-button. With a walking-stick in his hand, used to walk majestically. People used to greet him in awe and respect.

 He was the Head-master of old St. Thomas high school in Honnavar at his retirement. He was man of letters. He had written number of poems and books in Kannada. He had deep knowledge in English and Sanskrit.

He used to perform religious functions like SatyaNarayan Pooja at home by himself, following all religious vidhis by chanting mantras. He was sympathetic. He used to help people who were in distress. He used to solve tussles in- families tactfully.

Those days, hardly we had been to grandfather’s house. My father was strict-disciplinarian. He didn’t like to send us to relatives’ house. When my grandfather used to come home, we had felt happy for he was giving us peppermints and sweet toffees. The last time I had seen him when I was in ninth standard. We had stayed in a rented-house in Sanappa- Chawl at the back of Devikeri in Sirsi. My father was Circle-Officer at that time. My grandfather had come home. We were over-joyed to eat ‘benne-butter’ which he had fetched. That was the last. After two years he died.

When I was working in college in Kumta, many teachers had asked me,“your grandfather was such a great personality, why can’t you write about him?” I had kept mum. I could not spare time to write for I was heavily burdened with my college and house-hold work.

 Even now I cannot forget the gigantic- figure of my grandfather. It cannot be vanished from my memory. I bow my head in respect when I think of him.

 

                                                                             Indu Naik
 

Sunday, June 1, 2014

Beginning of the School in the month of June



Beginning of School in the month of June

After fun and frolic of summer vacation

The School has begun.

I can see children rushing different schools,

Walking on the narrow public-path

In front of my house.

Some of them moving in auto-rickshaw,

Some other by mini-bus,

Many of them by school-bus

Others on scooters or on bike

A few of them in their own car.

Mode of transport may be different

But their motto-Go to school to learn.

The scene reminded me those past days

Where my husband and I struggled hard

Sending our children to school anyway

With heavy bags on their back,

Water-bottle in one hand

And lunch-box in the other.

Standing on our fore-toes to meet

-the school- demands of our children

No time for us to stand-at-ease and stare

Darted towards our working-place

-for we both were job-holders.

Oh! It’s an exciting time for parents now

And for many kids too it’s an unsettling

Buying new books, bags and uniforms

-and other school-essentials

Wrapping school books in brown paper,

Choosing and pasting labels in order

 And so-so- so- on.

All these need a bit of plan

-to avoid their anxiety to settle-in.

I thought old days were of jitter

-but now it is still busier and twitter.

                                               

Indu Naik