aಪುನೀತನ ಬಾಲ್ಯ
ಅಂದು
ಪುನೀತ, ಎಲ್ಲಿ ಹೋಗಿದೆ,
ನಿನ್ನ
ಚಿತ್ತ.
ಇಲ್ಲ
ಅದು ಅಭ್ಯಾಸದತ್ತ.
ಹರಿದಿದೆ
ಕ್ರಿಕೆಟ್ಟಿನತ್ತ
ತರಬೇಕೇನು ಬೆತ್ತ?
ಬಾಲ್ಯದಲ್ಲಿ
ನೀ ಹೋಮ್ವರ್ಕ್ ಮಾಡುತ್ತಿರುವಾಗ
ನಿನ್ನ ಮಮ್ಮಿ ಗದರಿಸುತ್ತಿದ್ದುದು ಹೀಗೆ.
ಕಂಠಪಾಠಮಾಡಿ,ಅಭ್ಯಾಸ ಒಪ್ಪಿಸುವ
ಜಾಯಮಾನ ನಿನ್ನದಲ್ಲವಾಗಿತ್ತು.
ಏನಿದ್ದರೂ ಸ್ವಂತಿಕೆಯೇ ನಿನ್ನದಾಗಿತ್ತು.
ಆಟೋಟಗಳಲ್ಲಿ ನಿನ್ನ ಆಸಕ್ತಿಕಂಡ ನಿನ್ನ ಡ್ಯಾಡಿ
ಕೇವಲ ಹಾಸ್ಯಕ್ಕಾಗಿ ಹೇಳುತ್ತಿದ್ದ ಮಾತು.
“ಓದಲಾಗದಿದ್ದರೆ ,ಮನೆಯಂಗಳದಲ್ಲೊಂದು ಅಂಗಡಿ ಹಾಕುವೆ.
ನೀ ಸಾಮಾನನ್ನು ಮಾರಾಟಮಾಡು” ಎಂದು.
ಹಾಸ್ಯದ ಮಾತನ್ನೂ ಸಹಿಸದ ಈ ನಿನ್ನ ಮಮ್ಮಿ
ಸದಾ ನಿನ್ನ ಹುರಿದುಂಬಿಸುತ್ತಿದ್ದುದು ನೆನಪಿದೆಯಾ?
“ಪ್ರತಿಯೊಂದು ಮಗುವಿನಲ್ಲಿಯೂ ಭಿನ್ನತೆಇದೆ,ಹೋಲಿಕೆ ಬೇಡ.
He
will shine one or the other day. ಚಿಂತೆಬಿಡಿ.”
ಎಂದು.
ಇಂದು
ಅದೆಷ್ಟೆತ್ತರಕ್ಕೆ
ಬೆಳೆದೆ ನೀ,ಕಂದ?
ಆರಡಿಗಿಂತಲೂ ಹೆಚ್ಚು
ಭೌತಿಕವಾಗಿಯೂ, ಭೌಧ್ದಿಕವಾಗಿಯೂ.
ಎಲೆಮರೆಯ ಕಾಯಿಯಂತಿದ್ದು,
ಯಾರ ಗಮನಕ್ಕೂ ಬಾರದ ರೀತಿಯಲ್ಲಿ,
ನಿನ್ನರಿವು ನಿನಗೆ ಗುರು ಎನ್ನುವಂತೆ
ನಿನ್ನ ಉನ್ನತಿಯತ್ತ ನೀನೇ ಹೆಜ್ಜೆ ಹಾಕಿದೆಯಾ ಕಂದ?
ಬಿ.ಇ. ಓದುವಾಗ ನೀ ಪ್ರಗತಿಶೀಲನಾದೆ.
ಅಂತರ್ ಕಾಲೇಜು ಪಂದ್ಯಾಟದಲ್ಲಿ
ನೀ ಗೆದ್ದ ಶೀಲ್ಡುಗಳು ಒಂದೇ, ಎರಡೇ,
ಇನ್ನೂ
ಮನೆಯ ಶೋಕೇಸ್ನಲ್ಲಿ ಝಗಝಗಿಸುತ್ತಿವೆ.
ಐದನೇಯ ಸೆಮಿಸ್ಟರ್ನಲ್ಲೇ ಕ್ಯಾಂಪಸ್
ಸೆಲೆಕ್ಟಾದೆ.
ಪದವಿ ನಂತರ ನೌಕರಿ ನೀ ಪಡೆದೆ.
ದಿಗ್ಗಜ ಕಂಪನಿಯಲ್ಲಿ ಸಾಫ್ಟವೇರ್ ಇಂಜನಿಯರ್ ಆಗಿ
ಬೆಂಗಳೂರು,ಪುಣೆಯಂತಹ ದೇಶೀಯ ನಗರಳಲ್ಲಷ್ಟೇ
ಅಲ್ಲದೆ
ಸಾಗರದಾಚೆ ಬಹುದೂರದ ಅಂಕಾರದಲ್ಲಿ
ಒಂಟಿಯಾಗಿ ನೆಲೆಸಿ,ನೌಕರಿ ಮಾಡುತ್ತಿರುವ
ನೀನು
ನಿಜಕ್ಕೂ
ಹೆಮ್ಮೆಯ ಪುತ್ರ.
ತಂದೆ-ತಾಯಿಯರ ಮನದಾಳದ ಕನಸನ್ನು ನನಸಾಗಿಸಿದೆಯಾ ಕಂದ?
ತಂದೆಯ ಪ್ರೀತಿಯ ಮಗನಾಗಿ,
ತಾಯಿಯೇ
ನಿನ್ನ ಜೀವನದಲ್ಲಿ ಅತ್ಯಂತ ಪ್ರಭಾವಶಾಲಿ ಎಂದೆಯಲ್ಲ.
ಜನ್ಮ
ಸಾರ್ಥಕವಾಯಿತೆಂಬ ಧನ್ಯತಾಭಾವ ನನ್ನಲ್ಲೀಗ.
ನಿನ್ನ
ವ್ಯಕ್ತಿತ್ವದ ಕಂಪು ದಶದಿಕ್ಕುಗಳಲ್ಲೂ ಪಸರಿಸಲಿ.
ಇಡೀ
ಪ್ರಪಂಚವನ್ನೇ ಗೆದ್ದು ಬರುವ ಧೀರನಾಗು ಕಂದ!
Indu Naik
No comments :
Post a Comment