ಯಾರು ಮಾಡಿದರು ಈ ಜೋಡಿ?
ಬ್ರಹ್ಮ ಹಾಕಿದ ಗಂಟೋ?
ಹಿರಿಯರ ಆಶೀರ್ವಾದದ ನಂಟೋ?
ಒಂದೂ ಅರಿಯೆನು ನಾ.
ಇಂದು-ಶಿವಾನಂದರ ಈ ಜೋಡಿ
ನೋಡಿದವರೆಲ್ಲರ ಮನಸ್ಸಿಗೆ ಹಾಕಿದೆ ಮೋಡಿ.
ಎಲ್ಲಿಯ ಶಿವಾನಂದ, ಎಲ್ಲಿಯ ಇಂದು?
ಇಬ್ಬರಲ್ಲೂ ಅಜಗಜಾಂತರ ವ್ಯತ್ಯಾಸ.
ಸ್ವಭಾವದಲ್ಲೂ,
ಮನೋವೃತ್ತಿಯಲ್ಲೂ, ಕಿಂಚ್ಚಿತ್ತು ವಯಸಿನಲ್ಲೂ.
ಆದರೂ ಬಾಳಿನಲ್ಲಿ ಅದೆಂತಹ
ಅನ್ಯೋನ್ಯತೆ!
ಅದೆಂತಹ ಬಾಂಧವ್ಯ!
ಒಬ್ಬರನ್ನು ಬಿಟ್ಟು ಇನ್ನೊಬ್ಬರಿಲ್ಲ
ಎನ್ನುವಷ್ಟು ಸಾಮರಸ್ಯ!
ಅರೆರೆ!!! ಇದೆಂತಹ ಅಪರೂಪದ ಜೋಡಿ.
ಶಿವಾನಂದ
ನೋಡಲು ಬಲು ಚೆಂದ,
ಗುಣದಲ್ಲಿ
ಅಪರಂಜಿ, ಹಣದಲ್ಲಿ ಗುಲಗಂಜಿ,
ಇವರದು,
ನಿರ್ದಾಕ್ಷಿಣ್ಯ, ನೇರ- ಮಾತು
ಕಟೋರವಾದರೂ ಅಷ್ಟೇ ಸತ್ಯ.
ಬಹುಶಃ ಬಳುವಳಿಯಾಗಿ ಬಂದಿರಬೇಕು
ಈ ಗುಣ
ಇವರ ತಂದೆಯಿಂದ.
ತಂದೆಯ ಶಿಕ್ಷಕ ವೃತ್ತಿಗಿಂತ, ಮಾತೃವಾತ್ಸಲ್ಯವೇ
ಪ್ರಭಾವಶಾಲಿಯಾಯಿತು ಇವರಿಗೆ ಜೀವನದಲ್ಲಿ.
“ಇಂದು’ ಎಲ್ಲದರಲ್ಲೂ ಮುಂದು ಎನ್ನುವಂತೆ
ಈಕೆಯ ಸ್ಫಟಿಕದಂತಹ ಮಾತು, ಪಾದರಸದಂತಹ ಕೃತಿ
ಕಟ್ಟು-ನಿಟ್ಟಿನ
ಶಿಸ್ತು, ದೃಢ- ಸಂಕಲ್ಪ
ಜೀವನ- ಪಥದಲಿ ಎಂದಿಗೂ ಹಿಂದೆ ಬೀಳದೆ
ಭುಜಕೆ ಭುಜ
ಕೊಟ್ಟು,ಹೆಜ್ಜೆಯಲಿ ಹೆಜ್ಜೆ ಇಟ್ಟು
ಸಾಗುತಿಹಳು
ಮುಂದೆ ಮುಂದೆ.
ಗಂಡನ ಹಾಸ್ಯ-ಪ್ರಜ್ಞೆ,
ಹೆಂಡತಿಯ ಗಾಂಭೀರ್ಯತೆ
ಆಗಿದೆ ಈವರೀರ್ವರ ಬಾಳ- ಪಯಣ
ನಂದಗೋಕುಲದಂತೆ.
ಬರೆದವರು:- ಇಂದು ನಾಯ್ಕ.
No comments :
Post a Comment